ಶಿವಮೊಗ್ಗ:ಶಿವಮೊಗ್ಗ–ಭದ್ರಾವತಿ ರೈಲು ಮಾರ್ಗದಡಿ ಇರುವ ಕೆಲವು ಲೆವೆಲ್ ಕ್ರಾಸಿಂಗ್ (ಎಲ್ಸಿ)ಗಳಲ್ಲಿ ಪರೀಕ್ಷಾ ಕಾರ್ಯ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಅವಧಿಗೆ ವಾಹನ ಸಂಚಾರವನ್ನು ನಿಷೇಧಿಸಿ, ಬದಲಿ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಅಪರ ಜಿಲ್ಲಾಧಿಕಾರಿಗಳು ನೀಡಿರುವ ಆದೇಶದ ಪ್ರಕಾರ, ಎಲ್ಸಿ ನಂ. 35, 38 ಹಾಗೂ 38/ಎಗಳಲ್ಲಿ ತಾತ್ಕಾಲಿಕವಾಗಿ ರೈಲು ಮಾರ್ಗ ಪರಿಶೀಲನೆ ಮತ್ತು ಎಲ್ಸಿ ಓಪನ್ ಪರೀಕ್ಷಾ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 19ರಿಂದ 25ರವರೆಗೆ ವಿವಿಧ ದಿನಗಳಲ್ಲಿ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ.
ಎಲ್ಸಿ 35 – ಲಕ್ಷ್ಮೀಪುರ ರಸ್ತೆ
- ಮುಚ್ಚುವ ಅವಧಿ: ಅ.19 ಬೆಳಿಗ್ಗೆ 8 ಗಂಟೆಯಿಂದ ಅ.20 ಸಂಜೆ 6 ಗಂಟೆವರೆಗೆ
- ಬದಲಿ ಮಾರ್ಗ: ಬಿ.ಹೆಚ್. ರಸ್ತೆ ಮುಖಾಂತರ ಕಡದಕಟ್ಟೆ–ಹೆಬ್ಬಂಡಿ ರಸ್ತೆ ಸಂಪರ್ಕ–ಲಕ್ಷ್ಮೀಪುರ ರಸ್ತೆ ಮಾರ್ಗ
ಎಲ್ಸಿ 38 – ನವುಲೆ ಬಸವಾಪುರ ರಸ್ತೆ
- ಮುಚ್ಚುವ ಅವಧಿ: ಅ.22 ಬೆಳಿಗ್ಗೆ 8 ಗಂಟೆಯಿಂದ ಅ.23 ಸಂಜೆ 6 ಗಂಟೆವರೆಗೆ
- ಬದಲಿ ಮಾರ್ಗ: ಎಲ್ಸಿ 35 ಮುಖಾಂತರ ಮಜ್ಜಿಗೇನಹಳ್ಳಿ–ನವುಲೆ ಬಸವಾಪುರ ಸಂಪರ್ಕ ರಸ್ತೆ
ಎಲ್ಸಿ 38/ಎ – ಹೊನ್ನವಿಲೆ ರಸ್ತೆ
- ಮುಚ್ಚುವ ಅವಧಿ: ಅ.24 ಬೆಳಿಗ್ಗೆ 8 ಗಂಟೆಯಿಂದ ಅ.25 ಸಂಜೆ 6 ಗಂಟೆವರೆಗೆ
- ಬದಲಿ ಮಾರ್ಗ: ಎಲ್ಸಿ 38 ಮುಖಾಂತರ ನವುಲೆ ಬಸವಾಪುರ ರಸ್ತೆ–ಹೊನ್ನವಿಲೆ ರಸ್ತೆ ಮಾರ್ಗ
ಜಿಲ್ಲಾಡಳಿತವು ವಾಹನ ಸವಾರರು ಮತ್ತು ಸಾರ್ವಜನಿಕರು ಈ ಬದಲಿ ಮಾರ್ಗಗಳಲ್ಲಿ ನಿರ್ದಿಷ್ಟ ದಿನಾಂಕಗಳ ಅವಧಿಯಲ್ಲಿ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸಲು ಮನವಿ ಮಾಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಸಾವು !
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

