ಶಿವಮೊಗ್ಗ ಸುದ್ದಿ

ಗೌರಿ–ಗಣೇಶ ಹಬ್ಬ: ಮೊದಲು ಯಾವ ಪೂಜೆ? ಇಲ್ಲಿದೆ ಶುಭ ಮುಹೂರ್ತ

ಶಿವಮೊಗ್ಗದಲ್ಲಿ ಈ ಬಾರಿ ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬ ಸೆಪ್ಟೆಂಬರ್ 14ರಂದು ಆಚರಿಸಲಾಗುತ್ತದೆ. ಗೌರಿ ಪೂಜೆಯನ್ನು ಬೆಳಿಗ್ಗೆ 6.54ರೊಳಗೆ ನೆರವೇರಿಸುವುದು ಸೂಕ್ತವಾಗಿದ್ದು, ಗಣೇಶ ಪೂಜೆಗೆ ಬೆಳಿಗ್ಗೆ 10ರಿಂದ 11.30 ಹಾಗೂ ಮಧ್ಯಾಹ್ನ 3ರಿಂದ 4.30ರವರೆಗೆ ಉತ್ತಮ ಸಮಯವಾಗಿದೆ.

ಗೌರಿ–ಗಣೇಶ ಹಬ್ಬ: ಮೊದಲು ಯಾವ ಪೂಜೆ? ಇಲ್ಲಿದೆ ಶುಭ ಮುಹೂರ್ತ – Gowri Ganesha

ಶಿವಮೊಗ್ಗ: ಮಲೆನಾಡಿನ ಮನೆಮನೆಗಳಲ್ಲಿ ಸಂಭ್ರಮದಿಂದ ಆಚರಿಸುವ ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿ ಗೌರಿ ಪೂಜೆ ಮತ್ತು ವರಸಿದ್ಧಿ ವಿನಾಯಕ ವ್ರತ ಎರಡೂ ಸೆಪ್ಟೆಂಬರ್ 14, 2026ರಂದು ಆಚರಿಸುವುದು ಸೂಕ್ತವಾಗಿದೆ.

WhatsApp Group Join Now
Telegram Group Join Now
Instagram Group Join Now

ಭಾದ್ರಪದ ಮಾಸದ ಶುಕ್ಲಪಕ್ಷದ ತದಿಗೆ ತಿಥಿಯಲ್ಲಿ ಸ್ವರ್ಣಗೌರಿ ವ್ರತ ಆಚರಿಸುವುದು ಸಂಪ್ರದಾಯ. ತದಿಗೆ ತಿಥಿ ಸೆಪ್ಟೆಂಬರ್ 13ರಂದು ಬೆಳಿಗ್ಗೆ 6.54ಕ್ಕೆ ಆರಂಭವಾದರೂ, ಸೆಪ್ಟೆಂಬರ್ 14ರ ಸೂರ್ಯೋದಯ ಸಮಯದಲ್ಲಿಯೂ ತದಿಗೆ ಇರುವುದರಿಂದ 14ರ ಬೆಳಿಗ್ಗೆಯೇ ಗೌರಿ ಪೂಜೆ ಮಾಡುವುದು ಸೂಕ್ತ ಎಂದು ತಿಳಿಸಲಾಗಿದೆ.

ಗೌರಿ ಪೂಜೆ ಯಾವ ಸಮಯದಲ್ಲಿ?

ಸೆಪ್ಟೆಂಬರ್ 14ರಂದು ಬೆಳಿಗ್ಗೆ 6.54ರೊಳಗೆ ಗೌರಿ ಪೂಜೆ ನೆರವೇರಿಸುವುದು ಉತ್ತಮ. ಸಂಪ್ರದಾಯದಂತೆ ಮೊದಲು ಗೌರಿ ಪೂಜೆಯನ್ನು ಪೂರ್ಣಗೊಳಿಸಿ ನಂತರ ಗಣಪತಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಬಹುದು.

ಅದೇ ದಿನ ಬೆಳಿಗ್ಗೆ 6.54ರ ನಂತರ ಚೌತಿ ತಿಥಿ ಆರಂಭವಾಗುವುದರಿಂದ ವರಸಿದ್ಧಿ ವಿನಾಯಕ ವ್ರತವನ್ನೂ ಸೆಪ್ಟೆಂಬರ್ 14ರಂದೇ ಆಚರಿಸಲಾಗುತ್ತದೆ.

ಗಣೇಶ ಪೂಜೆಗೆ ಶುಭ ಸಮಯ

ಸೆಪ್ಟೆಂಬರ್ 14ರಂದು ಶಿವಮೊಗ್ಗದಲ್ಲಿ ಗಣೇಶ ಪೂಜೆಗೆ ಅನುಕೂಲಕರ ಸಮಯವಾಗಿ:

  • ಬೆಳಿಗ್ಗೆ 7.45ರೊಳಗೆ
  • ಬೆಳಿಗ್ಗೆ 9.15ರ ನಂತರ
  • ಬೆಳಿಗ್ಗೆ 10ರಿಂದ 11.30ರವರೆಗೆ
  • ಮಧ್ಯಾಹ್ನ 3ರಿಂದ 4.30ರವರೆಗೆ

ಪೂಜೆ ಮಾಡಬಹುದು ಎಂದು ತಿಳಿಸಲಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಬೆಳಿಗ್ಗೆ ಸುಮಾರು 7.45ರಿಂದ 9.15ರವರೆಗೆ ರಾಹುಕಾಲ ಇರುವುದರಿಂದ, ಈ ಸಮಯವನ್ನು ತಪ್ಪಿಸಿ ಗಣೇಶ ಪೂಜೆ ಮಾಡಲು ಬಯಸುವವರು 9.15ರ ನಂತರ ಪೂಜೆ ನಡೆಸಬಹುದು.

ಮೊದಲು ಗೌರಿ, ನಂತರ ಗಣೇಶ

ಗೌರಿ–ಗಣೇಶ ಹಬ್ಬ ಒಂದೇ ದಿನ ಬಂದಿರುವ ಹಿನ್ನೆಲೆಯಲ್ಲಿ ಹಲವು ಮನೆಗಳಲ್ಲಿ ಬೆಳಗ್ಗೆಯೇ ಗೌರಿ ಪೂಜೆ ಮುಗಿಸಿ ನಂತರ ಗಣಪತಿ ಪ್ರತಿಷ್ಠಾಪನೆ ಹಾಗೂ ವರಸಿದ್ಧಿ ವಿನಾಯಕ ಪೂಜೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಗೌರಿ ಹಬ್ಬದಲ್ಲಿ ಮಹಿಳೆಯರು ಮಂಗಳದ್ರವ್ಯಗಳೊಂದಿಗೆ ಸ್ವರ್ಣಗೌರಿಯನ್ನು ಪೂಜಿಸಿ ಕುಟುಂಬದ ಸುಖ-ಸಮೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ನಂತರ ಗಣೇಶನನ್ನು ಪ್ರತಿಷ್ಠಾಪಿಸಿ ಮೋದಕ, ಕಡುಬು ಸೇರಿದಂತೆ ವಿವಿಧ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ.

ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸುತ್ತಿದ್ದು, ಮನೆಮನೆಗಳಲ್ಲೂ ಗೌರಿ–ಗಣೇಶ ಹಬ್ಬದ ಸಂಭ್ರಮ ಹೆಚ್ಚಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650