SHIVAMOGGA | ಮಾರಕಾಸ್ತ್ರಗಳಿಂದ (Weapons) ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನನ್ನು ಬರ್ಬರವಾಗಿ ಹತ್ಯೆಗೈದ (Murder) ಘಟನೆ ಶಿವಮೊಗ್ಗದ ಆಯನೂರು ಗೇಟ್ ಬಳಿ ಸ್ಮಶಾನದಲ್ಲಿ ನಡೆದಿದೆ.
ಹೇಗಾಯ್ತು ಘಟನೆ ?

ಜೆ.ಪಿ ನಗರ ನಿವಾಸಿ ರಾಜುನಾಯ್ಕ್ ಹಾಗೂ ವಿಕ್ರಮ್ ಇಬ್ಬರೂ ಸ್ನೇಹಿತರು ಕಂಠಪೂರ್ತಿ ಮದ್ಯ ಸೇವಿಸಿದ್ದು, ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ವಿಕ್ರಮ್ ಎಂಬಾತನು ರಾಜುನಾಯ್ಕ್ (30) ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ.
ಕುಡಿದ ಮತ್ತಿನಲ್ಲಿ ವೈಯಕ್ತಿಕ ವಿಚಾರ ಪ್ರಸ್ತಾಪವಾಗಿ ಇಬ್ಬರ ನಡುವೆ ಜಗಳ ಶುರುವಾಗಿದ್ದು ನಂತರ ವಿಕೋಪಕ್ಕೆ ತಿರುಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಆರೋಪಿ ವಿಕ್ರಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
Read More :ನಾಲ್ಕೈದು ಕಾಡುಕೋಣಗಳ ಕಳೇಬರ ಪತ್ತೆ ! ದುಷ್ಕರ್ಮಿಗಳು ಬೇಟೆಯಾಡಿರುವ ಶಂಕೆ

