ರಾಮಚಂದ್ರಪುರ ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

0 182


ಹೊಸನಗರ: ತಾಲ್ಲೂಕು ರಾಮಚಂದ್ರಪುರ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯು ಬುಧವಾರ ನಡೆದಿದ್ದು ಕಪಿಲ ಪೈನಾನ್ಸ್ ಮಾಲೀಕರಾದ ಸುಬ್ರಹ್ಮಣ್ಯ ಅಧ್ಯಕ್ಷರಾಗಿ ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ರುಕ್ಮೀಣಿ ಕೃಷ್ಣಮೂರ್ತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಚುನಾವಣೆ ಪ್ರಕ್ರಿಯೆಯನ್ನು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೆಶಕರಾದ ಪುಟ್ಟನಾಯ್ಕರವರು ನಡೆಸಿದರು.


ಅಭಿವೃದ್ಧಿಯೊಂದೆ ನನ್ನ ಗುರಿ :
ಹಿಂದಿನ ಅವಧಿಯಲ್ಲಿ ಆರಗ ಜ್ಞಾನೇಂದ್ರರವರ ಸಹಕಾರದೊಂದಿಗೆ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ 80% ಕಾರ್ಯವನ್ನು ಮುಗಿಸಿದ್ದು ಒಂದು ಸುಗ್ರಾಮ ಪಂಚಾಯಿತಿಯನ್ನು ಮಾಡುವ ಗುರಿಯನ್ನು ನಾನು ಹೊಂದಿದ್ದು ನನಗೆ ಎಲ್ಲ ಸದಸ್ಯರ ಬೆಂಬಲವಿದೆ ನಮ್ಮಲ್ಲಿ ಯಾವುದೇ ಮನಸ್ತಾಪಗಳಿಲ್ಲ ಮುಂದಿನ ಎರಡುವರೆ ವರ್ಷದಲ್ಲಿ ಹೊಸನಗರ ತಾಲ್ಲೂಕಿಗೆ ಅಭಿವೃದ್ದಿ ಪಥದಲ್ಲಿ ಮೊದಲ ಸ್ಥಾನಕ್ಕೆ ಈ ಗ್ರಾಮ ಪಂಚಾಯತಿಯನ್ನು ತೆಗೆದುಕೊಂಡು ಹೋಗುವ ಗುರಿಯನ್ನು ಹೊಂದಿದ್ದೇನೆ ನನಗೆ ಗ್ರಾಮ ಪಂಚಾಯಿತಿಯ ಸದಸ್ಯರ ಹಾಗೂ ಸಿಬ್ಬಂದಿಗಳ ಜೊತೆಗೆ ಗ್ರಾಮದ ಗ್ರಾಮಸ್ಥರ ಸಹಕಾರ ಮಾಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ಗೋಪಾಲ್, ಸದಸ್ಯರಾದ ರತ್ನಮ್ಮ, ಪಾರ್ವತಮ್ಮ, ಗುರುಮೂರ್ತಿ, ಗ್ರಾಮಸ್ಥರಾದ ಸುಬ್ರಹ್ಮಣ್ಯ, ಶಿವಪ್ಪ, ಕೃಷ್ಣಮೂರ್ತಿ ಜಯರಾಮ್ ವಿಶ್ವನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!