ಗೆಳೆಯನ ಮೊಬೈಲ್ ಹುಡುಕುತ್ತಾ ಹೋದ ಯುವಕ ರೈಲಿಗೆ ಸಿಲುಕಿ ಸಾವು !

0 290

ಶಿವಮೊಗ್ಗ : ಕಳೆದು ಹೋದ ಮೊಬೈಲ್ ಹುಡುಕುತ್ತಾ ಹೋದ ಯುವಕನೋರ್ವ ತಾಳಗುಪ್ಪ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಶಿವಮೊಗ್ಗ ವಲಯದ ಸೋಮಿನಿಕೊಪ್ಪ ವೈದ್ಯಕೀಯ ಕಾಲೇಜು ಬಳಿ ನಾಲ್ವರು ಗೆಳೆಯರು ರಾತ್ರಿ ಹೋಗಿದ್ದು, ಅಲ್ಲಿ ಓರ್ವನ ಮೊಬೈಲ್ ಕಳೆದು ಹೋಗಿದೆ. ಅದನ್ನು ಹುಡುಕುತ್ತಿದ್ದಾಗ ಶಿವಮೊಗ್ಗ ವಿನೋಬನಗರ ಕರಿಯಣ್ಣ ಕ್ರಾಸ್ ಬಳಿಯ ಹೇಮಂತ್ (24) ಯುವಕ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಗೋಪಾಲ್ ಎಂಬುವರ ಪುತ್ರ ಹೇಮಂತ್ ಎಂದು ಗುರುತಿಸಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಯುತ್ತಿದ್ದು, ಮುಂದಿನ ಕ್ರಮವನ್ನು ರೈಲ್ವೆ ಪೊಲೀಸರು ಕೈಗೊಂಡಿದ್ದಾರೆ.

ಸಂತಾಪ:
ಹೇಮಂತ್ ಅವರ ನಿಧನಕ್ಕೆ ಕರ್ನಾಟಕ ಕರಾಟೆ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ವಿನೋದ್ ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.

error: Content is protected !!