ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ನಾನೇ ಪ್ರಬಲ ಅಭ್ಯರ್ಥಿ ; ಹೊಸ ಬಾಂಬ್ ಸಿಡಿಸಿದ ಬೇಳೂರು

0 383

ಬೆಂಗಳೂರು/ಶಿವಮೊಗ್ಗ : ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ನಾನೇ ಪ್ರಬಲ ಅಭ್ಯರ್ಥಿಯಾಗಬಲ್ಲೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ. ಶಿವಮೊಗ್ಗ‌ ಕ್ಷೇತ್ರಕ್ಕೆ ನಾನು ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿ ಆಗಬಲ್ಲೆ. ನನಗೆ ಟಿಕೆಟ್ ಕೊಟ್ಟರೆ ನಾನೇ ಗೆಲ್ಲುತ್ತೇನೆ. ಇದರ ಬಗ್ಗೆ ನಮ್ಮ ನಾಯಕರ ಜತೆ ಇನ್ನಷ್ಟೇ ಚರ್ಚಿಸಬೇಕಿದೆ ಎಂದರು.


ಬಿಜೆಪಿಯವರ ದುರಾಡಳಿತ ಕೊನೆ ಮಾಡಲು ನಾನೇ ಸಮರ್ಥ ಅಭ್ಯರ್ಥಿಯಾಗಲಿದ್ದೇನೆ. ಕುಮಾರ ಬಂಗಾರಪ್ಪ ಅವರನ್ನು ಕರೆತಂದು ಟಿಕೆಟ್ ಕೊಡೋ ಚರ್ಚೆ ಪಕ್ಷದಲ್ಲಿ ನಡೆದಿಲ್ಲ. ಬೇರೆ ಯಾರಿಗೆ ಟಿಕೆಟ್ ಕೊಟ್ಟರೆ ಸಮಸ್ಯೆ ಇಲ್ಲ. ಆದ್ರೆ ನಾನು ಪ್ರಬಲ, ಸಮರ್ಥ ಅಭ್ಯರ್ಥಿ ಆಗಬಲ್ಲೆ ಎಂದರು.

ಗೃಹ ಸಚಿವ ಡಾ. ಜಿ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿ, ಊಟಕ್ಕೆ ಕರೆದರೆ ಅದು ಬಣ ರಾಜಕಾರಣ ಆಗಲ್ಲ. ಸಿಎಂ, ಡಿಕೆಶಿ ಇಬ್ಬರು ನಾಯಕತ್ವದಲ್ಲಿ ಸರ್ಕಾರ ನಡೀತಿದೆ. ಬಣ ರಾಜಕಾರಣ ಇಲ್ಲ. ಈ ಕುಮಾರಸ್ವಾಮಿ ಮಧ್ಯದಲ್ಲಿ ಸ್ವಲ್ಪ ಕೈ ಆಡಿಸ್ತಿದ್ದಾರೆ. ಕುಮಾರಸ್ವಾಮಿ ಈಗ ಸ್ವಲ್ಪ ಚಿಗುರಿಕೊಂಡಿದ್ದಾರೆ. ಮೋದಿಯವರನ್ನು ಭೇಟಿ ಮಾಡಿ ಬಂದ ನಂತರ ಕುಮಾರಸ್ವಾಮಿ ಚಿಗುರಿಕೊಂಡಿದ್ದಾರೆ ಎಂದರು.

ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್. ಡಿಕೆಶಿ ಅವರಿಂದ ಕುಮಾರಸ್ವಾಮಿ ಸಿಎಂ ಆದ್ರು. ಡಿಕೆಶಿ ಏನು ಅನ್ಯಾಯ ಮಾಡಿದ್ದಾರೆ ಅವರಿಗೆ? ಅವರ ತಾಲ್ಲೂಕನ್ನ ಬೆಂಗಳೂರಿಗೆ ಸೇರಿಸಿದರೆ ಹೆಚ್ಡಿಕೆಗೆ ಏನು ಸಮಸ್ಯೆ? ಅವರ ತಾಲ್ಲೂಕನ್ನ ಅಭಿವೃದ್ಧಿ ಮಾಡ್ತಿದ್ದಾರೆ ಡಿಕೆಶಿ ಕನಕಪುರ ಜಿಲ್ಲೆ ಮಾಡಲಿ ಬಿಡಿ ಎಂದರು.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಯಾಕೆ ಏರ್‌ಪೋರ್ಟ್ ಮಾಡಿದ್ರು? ಶಿವಮೊಗ್ಗದಲ್ಲಿ ಯಡಿಯೂರಪ್ಪ ಜಮೀನು ಇದೆ ಅದಕ್ಕಾಗಿ ಏರ್‌ಪೋರ್ಟ್ ಮಾಡಿದರು. ಕನಕಪುರದಲ್ಲೂ ಡಿಕೆಶಿ ಸೇರಿ ಹಲವರ ಜಮೀನು ಇದೆ. ಜನರ ಜಮೀನೂ ಇದೆ. ಕನಕಪುರ ಅಭಿವೃದ್ಧಿ ಮಾಡಿದರೆ ಇವರಿಗೇನು ಸಮಸ್ಯೆ? ಎಂದು ಪ್ರಶ್ನಿಸಿದರು.

Leave A Reply

Your email address will not be published.

error: Content is protected !!