ಹೊಸನಗರ ; ಅಕ್ರಮವಾಗಿ ಮರಳು ತುಂಬಿದ್ದ ಲಾರಿ ವಶಕ್ಕೆ
ಹೊಸನಗರ: ತಾಲ್ಲೂಕಿನ ಸುತ್ತ, ಹರಿದ್ರಾವತಿ, ಬಾಳೇಕೊಪ್ಪ, ನಗರ, ರಿಪ್ಪನ್ಪೇಟೆ ಸೇರಿದಂತೆ ಇತರೆಡೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಪೊಲೀಸ್, ಕಂದಾಯ ಇಲಾಖೆಯವರಿಗೆ ಹಾಗೂ ಗಣಿ ಭೂ ವಿಜ್ಞಾನ ಇಲಾಖೆಯವರಿಗೆ ಚಳ್ಳೆ ಹಣ್ಣು ತಿನಿಸುತ್ತ ರಾತ್ರಿ ವೇಳೆಯಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದು ಇಲ್ಲಿನ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಾನಂದ್ ಕೊಳಿ ಹಾಗೂ ಸಿಬ್ಬಂದಿಗಳಾದ ಅವಿನಾಶ್, ಗೋಪಾಲಕೃಷ್ಣರವರ ತಂಡ ರಾತ್ರಿ, ಹಗಲು ಕಾವಲು ಕಾಯುತ್ತಿದ್ದು ಹೊಸನಗರ ತಾಲ್ಲೂಕು ಸುತ್ತ ಗ್ರಾಮದಲ್ಲಿ ಅಕ್ರಮವಾಗಿ ಮರಳು ತುಂಬಿದ ಸಾಗರದ ಚಂದ್ರು ಎಂಬುವವರಿಗೆ ಸೇರಿದ (ಕೆಎ19ಎಬಿ 9021) ಲಾರಿಯನ್ನು ವಶ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.