ಹೊಸನಗರ ಸ್ವೀಪ್ ಸಮಿತಿಯಿಂದ ಮದುವೆ ಮನೆಯಲ್ಲಿ ಮತದಾನ ಜಾಗೃತಿ
ಹೊಸನಗರ: ಪಟ್ಟಣದ ಆರ್ಯ ಈಡಿಗರ ಸಭಾಭವನದಲ್ಲಿಂದು ತಾಲ್ಲೂಕು ಪಂಚಾಯಿತಿ ಜೀಪ್ ಡ್ಪೈವರ್ ಹರ್ಷಕುಮಾರ್ರವರ ಮದುವೆ ನಡೆಯಿತು.
ಹೊಸನಗರ ಸ್ವೀಪ್ ಸಮಿತಿಯ ನರೇಂದ್ರಕುಮಾರ್ ಹಾಗೂ ತಾಲ್ಲೂಕಿನ ಎಲ್ಲ ಸರ್ಕಾರಿ ಅಧಿಕಾರಿ ಹಾಗೂ ನೌಕರ ವರ್ಗ ಈ ಬಾರಿ ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ಈ ದೇಶದ ಪ್ರಜಾಪ್ರಭುತ್ವಕ್ಕೆ ಮಹತ್ವ ನೀಡಬೇಕೆಂದು ಭಿತ್ತಿ ಪ್ರತದ ಮೂಲಕ ಮದುವೆ ಮನೆಯಲ್ಲಿ ಪ್ರಚಾರ ನಡೆಸಿ ಮತದಾನದ ಜಾಗೃತಿ ಮೂಡಿಸಿದರು.