ಶ್ರಾವಣ ಸಂಪತ್ ತೃತೀಯ ಶುಕ್ರವಾರ ಹೊಂಬುಜ ಪದ್ಮಾವತಿ ದೇವಿಗೆ ವಿಶೇಷಾಲಂಕಾರ | ಧರ್ಮವನ್ನರಿತು ಬಾಳುವ ಪಥವು ಸಂಕಷ್ಟ ಮುಕ್ತ ; ಶ್ರೀಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರಾವಣ ಸಂಪತ್ 3ನೇ ಶುಕ್ರವಾರದಂದು ಊರ ಪರವೂರ ಭಕ್ತವೃಂದದವರು ಶ್ರದ್ಧಾಪೂರ್ವಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಸಾನಿಧ್ಯ, ನೇತೃತ್ವ ಹಾಗೂ ಉಪಸ್ಥಿತಿಯಲ್ಲಿ ಜಿನಾಗಮೋಕ್ತ ವಿಧಿ-ವಿಧಾನಗಳು ಜರುಗಿದವು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

“ಪ್ರತಿಯೋರ್ವರು ಜೀವನದಲ್ಲಿ ಸಕಾರಾತ್ಮಕ ಆಶಾಭಾವದೊಂದಿಗೆ ಸದ್ಧರ್ಮ ವ್ರತಾಚರಣೆ ಪರಿಪಾಲಿಸುವ ಮೂಲಕ ವೈಯುಕ್ತಿಕ ಶ್ರೇಯಸ್ಸು ಲಭಿಸುವುದು ಶತಸಿದ್ಧ” ಎಂದು ಸ್ವಸ್ತಿಶ್ರೀಗಳವರು ಪವಚನದಲ್ಲಿ ತಿಳಿಸಿದರು. “ಧರ್ಮವನ್ನರಿತು ಬಾಳುವ ಪಥವು ಸಂಕಷ್ಟ ಮುಕ್ತ ಎನ್ನುತ್ತಾ ಭಕ್ತಿಯ ಫಲಶ್ರತಿ ಕುಟುಂಬದವರಿಗೂ, ಸಮಾಜ-ರಾಷ್ಟಕ್ಕೂ ದೊರಕಲಿದ್ದು, ಆಧ್ಯಾತ್ಮಿಕ ಜೀವನವು ಶ್ರೇಷ್ಠವಾದುದು” ಎಂದು ಭಕ್ತಸಮುದಾಯದವರನ್ನು ಆಶೀರ್ವದಿಸಿ ಹರಸಿದರು.

ಪ್ರಾತಃ ಕಾಲದಲ್ಲಿ ಶ್ರೀ ನೇಮಿನಾಥ ಸ್ವಾಮಿ, ಶ್ರೀಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ ಸನ್ನಿಧಿಗಳಲ್ಲಿ ಅಷ್ಟವಿಧಾರ್ಚನೆ ಪೂಜೆ ನೆರವೇರಿತು.

108 ವಿವಿಧ ಶರ್ಕರ ನೈವೇದ್ಯಗಳನ್ನು ಫಲ-ಪುಷ್ಪದೊಂದಿಗೆ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಅರ್ಪಿಸಿ ಪರಂಪರಾನುಗತ ಪೂಜಾ ವಿಧಾನವು ಭಕ್ತರಿಗೆ ಧನ್ಯತೆಯ ಭಾವ ಸ್ಪರಿಸಿತು. ವಸತಿ, ಉಪಹಾರ ಮತ್ತು ಅನ್ನಪ್ರಸಾದ ಸೇವೆಯನ್ನು ಶ್ರೀಮಠದ ವತಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.

Leave a Comment