ತೀರ್ಥಹಳ್ಳಿ ; ಮಾಜಿ ಶಿಕ್ಷಣ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ರಾಜಕಾರಣಿ ಕಿಮ್ಮನೆ ರತ್ನಾಕರ್ ಅವರು ಇಂದು ತಮ್ಮ 74ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ಕಾಂಗ್ರೆಸ್ ನಾಯಕರು ಮೃಗವಧೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ಶೇಡ್ಗಾರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ಪಣಿರಾಜ್ ಕಟ್ಟೆಹಕ್ಕಲು, ಕೆಡಿಪಿ ಸದಸ್ಯ ಕರುಣಾಕರ, ತಾ.ಪಂ ಮಾಜಿ ಅಧ್ಯಕ್ಷೆ ನವಮಣಿ ರವಿಕುಮಾರ್, ತಾ.ಪಂ ಮಾಜಿ ಸದಸ್ಯರಾದ ಅನ್ನಪೂರ್ಣ ಮೋಹನ್, ಯುವ ಮುಖಂಡರಾದ ಮುರುಳಿ ಹೊಸಳ್ಳಿ, ರವಿಕುಮಾರ್, ಸಫನ್ ಕಟ್ಟೆಹಕ್ಕಲು, ಸುಧೀರ್ ಕಟ್ಟೆಹಕ್ಕಲು ಮತ್ತಿತರರು ಇದ್ದರು.

