ಅಂಚೆ ಕಚೇರಿಗಳಲ್ಲಿ ತಾತ್ಕಾಲಿಕ ಸೇವಾ ಸ್ಥಗಿತ !

Written by Koushik G K

Published on:

ಭಾರತೀಯ ಅಂಚೆ ಇಲಾಖೆಯ ನಿರ್ದೇಶನದಂತೆ, ಹೊಸ ತಂತ್ರಾಂಶವಾದ APT 2.0 ಅನ್ನು ಅಳವಡಿಸಲು ಶಿವಮೊಗ್ಗ ಹಾಗೂ ಉಪ ಅಂಚೆ ಕಚೇರಿಗಳಲ್ಲಿ ತಾತ್ಕಾಲಿಕವಾಗಿ ವ್ಯವಹಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.

WhatsApp Group Join Now
Telegram Group Join Now
Instagram Group Join Now

Read More:ಯಾರೂ ತಿಳಿಯದ ಸರ್ಕಾರದ ಸ್ಕೀಮ್ – ಮೊಬೈಲ್ ಕ್ಯಾಂಟೀನ್‌ಗೆ ಲಕ್ಷಾಂತರ ಸಹಾಯ !

ಜೂನ್ 23 ರಂದು ಶಿವಮೊಗ್ಗ ಪ್ರಧಾನ ಅಂಚೆ ಕಚೇರಿಯಲ್ಲಿ, ಜೂನ್ 26 ರಂದು ಭದ್ರಾವತಿ ಹಾಗೂ ಸಾಗರ ಪ್ರಧಾನ ಅಂಚೆ ಕಚೇರಿಗಳೊಂದಿಗೆ ಅದರ ವ್ಯಾಪ್ತಿಯ ಎಲ್ಲಾ ಶಾಖಾ ಅಂಚೆ ಕಚೇರಿಗಳಲ್ಲಿ APT 2.0 ಅಳವಡಿಕೆ ನಡೆಯಲಿದೆ.

ಈ ತಂತ್ರಾಂಶವನ್ನು ಯಶಸ್ವಿಯಾಗಿ ಅಳವಡಿಸಲು, ಜೂನ್ 21 ರಂದು ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲೂಕುಗಳ ಅಂಚೆ ಕಚೇರಿಗಳು ಮತ್ತು ಜೂನ್ 25 ರಂದು ಭದ್ರಾವತಿ, ಸಾಗರ, ಸೊರಬ, ಹೊಸನಗರ ಹಾಗೂ ಶಿಕಾರಿಪುರ ತಾಲೂಕುಗಳ ಅಂಚೆ ಕಚೇರಿಗಳಲ್ಲಿ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು.

ಅಂಚೆ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಜಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More :ಕಾಡಾನೆ ದಾಳಿ: ಭದ್ರಾವತಿಯಲ್ಲಿ ವ್ಯಕ್ತಿ ದುರ್ಮರಣ !

Leave a Comment