ಗರ್ತಿಕೆರೆಯಲ್ಲಿ ನಾಳೆ ಮಾತೃನುಡಿ 13ನೇ ವರ್ಷದ ಕರುನಾಡ ಹಬ್ಬ

Written by Mahesha Hindlemane

Updated on:

ರಿಪ್ಪನ್‌ಪೇಟೆ ; ಅಮೃತ ಸಂಚಲನ ಯುವ ವೇದಿಕೆ ವತಿಯಿಂದ ಗರ್ತಿಕೆರೆಯಲ್ಲಿ ನಾಳೆ (ನ.04) ಮಾತೃನುಡಿ 13ನೇ ವರ್ಷದ ಕರುನಾಡ ಹಬ್ಬ ಏರ್ಪಡಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬೆಳಗ್ಗೆ 9.30ಕ್ಕೆ ಬಿ.ಎಸ್ ಪುರುಷೋತ್ತಮ್ ವೃತ್ತದಲ್ಲಿ ಕನ್ನಡ ಧ್ವಜಾರೋಹಣವನ್ನು ನಿವೃತ್ತ ಶಿಕ್ಷಕ ದೇವೇಂದ್ರಪ್ಪ ಬಿ ಬಸವಾಪುರ ನೆರವೇರಿಸಲಿದ್ದಾರೆ.

ಕಾರ್ಯಕ್ರಮಗಳು ;

ಸಂಜೆ 6:30ಕ್ಕೆ ಗರ್ತಿಕೆರೆ ಹೆಚ್. ಶಂಕರ್‌ರಾವ್ ರಂಗಮಂದಿರದಲ್ಲಿ ‘ನಾವು ನಮ್ಮವರು’ ಉದ್ಘಾಟನಾ ನೃತ್ಯ, ಕೆ.ಪಿ.ಎಸ್ ಅಮೃತ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 7:30ಕ್ಕೆ ‘ಕನ್ನಡ ಜ್ಯೋತಿ’ ಕರುನಾಡಿಗೆ ಬೆಳಕಿನ ಮೌನ ನಮನ ರಾತ್ರಿ 08:00 ಗಂಟೆಗೆ ಕಲಾಸಂಗಮ ಕಲಾವಿದರಿಂದ ವಿಜಯ್‌ ಕುಮಾರ್ ಕೊಡಿಯಾಲ್‌ ಬೈಲ್ ನಿರ್ದೇಶನದ ದೇಶ-ವಿದೇಶದಲ್ಲಿ ಅತಿ ಹೆಚ್ಚು ಪ್ರದರ್ಶನಗೊಂಡ ಅಮೋಘ ಕನ್ನಡ ನಾಟಕ ‘ಶಿವದೂತ ಗುಳಿಗ‘ ಕಾರ್ಯಕ್ರಮಗಳು ಜರುಗಲಿವೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Comment