Hosanagara

ಸರ್ಕಾರಿ ಬಾವಿ ಮುಚ್ಚಿ ಜಾಗ ನುಂಗಿದ ಬಲಾಢ್ಯರು ; ಕ್ರಮಕ್ಕೆ ಆಗ್ರಹ

InShot 20260827 211010431

ಹೊಸನಗರ : ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೆ ನಂಬರ್ 15ರಲ್ಲಿ ಬಲಾಢ್ಯರೊಬ್ಬರು ಸುಮಾರು 50 ವರ್ಷಗಳ ಹಳೆಯ ಬಾವಿಯನ್ನು ವಶಪಡಿಸಿಕೊಂಡು ನಂತರ ಆ ಬಾವಿಯನ್ನು ಮುಚ್ಚಿ ಜಾಗ ಕಬಳಿಕೆ ಮಾಡಿದ್ದಾರೆ. ಎಂ ಗುಡ್ಡೆಕೊಪ್ಪ ಈ ಬಗ್ಗೆ ಗ್ರಾಮ ಪಂಚಾಯತಿಯ ಅಂದಿನ ಸದಸ್ಯರೊಬ್ಬರು ಆ ಜಾಗಕ್ಕೆ ಬೇಲಿ ಹಾಕಿ ಗ್ರಾಮ ಪಂಚಾಯತಿಯ ಜಾಗ ಎಂದು ಬೋರ್ಡ್ ಹಾಕಿದ್ದರೂ ಆ ಬೋರ್ಡ್ ಮಾಯವಾಗಿ ಜಾಗ ಬಲಾಢ್ಯರ ಪಾಲಾಗಿದೆ ಎಂದು ಮಾವಿನಕೊಪ್ಪ ದಲಿತ ಸಂಘರ್ಷ ಸಮಿತಿಯ ಸದಸ್ಯ ಮಂಜುನಾಥ್ (ಬಾಬು) ಗ್ರಾಮ ಪಂಚಾಯತಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಆದರೆ ಬಾವಿ ಮುಚ್ಚಿದ್ದರೂ ಆ ಜಾಗವನ್ನಾದರೂ ಗ್ರಾಮ ಪಂಚಾಯತಿಯವರು ವಶಪಡಿಸಿಕೊಳ್ಳಲಿ, ಇಲ್ಲವಾದರೆ ಮುಂದಿನ ದಿನದಲ್ಲಿ ಮುಚ್ಚಿರುವ ಬಾವಿಗಾಗಿ ಹಾಗೂ ಗ್ರಾಮ ಪಂಚಾಯತಿಯ ಜಾಗಕ್ಕಾಗಿ ಹೋರಾಟ ಅನಿವಾರ್ಯ ಎಂದು ಅಧಿಕಾರಿಗಳಿಗೆ ಅವರು ಎಚ್ಚರಿಸಿದ್ದಾರೆ.

ಮಾಯವಾಗುವ ಹಂತದಲ್ಲಿದೆ ಇನ್ನೊಂದು ಬಾವಿ !

ಶಿವಮೊಗ್ಗ ರಸ್ತೆಯಲ್ಲಿರುವ ಸುಮಾರು 50 ವರ್ಷದ ಹಳೆಯ ಬಾವಿಯನ್ನು ಬಲಾಢ್ಯರು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವ ಸಂಚು ನಡೆಯುತ್ತಿದೆ ಎಂದು ಮಂಜುನಾಥ್‌ ಆಪಾದಿಸುತ್ತಿದ್ದು, ಮುಂದಿನ ದಿನದಲ್ಲಿ ಆ ಬಾವಿಯನ್ನು ಗ್ರಾಮ ಪಂಚಾಯತಿಯ ಸ್ವಾಧೀನಕ್ಕೆ ಪಡೆದು ಸರ್ಕಾರಿ ಬಾವಿಯಿರುವ ಜಾಗಕ್ಕೆ ಬೇಲಿ ಹಾಕಿ ಸಾರ್ವಜನಿಕರಿಗೆ ನೀರಿಗೆ ಅನುಕೂಲ ಮಾಡಿದರೆ ಸರ್ಕಾರಿ ಬಾವಿ ಉಳಿಸಬಹುದು ಎಂದಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಹೊಸನಗರ ತಾಲ್ಲೂಕಿನಲ್ಲಿ ಮಳೆಯಿಲ್ಲದೆ ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ಅಭಾವವಾಗುವ ಸಂದರ್ಭ ಬರುತ್ತಿದೆ. ಮಾವಿನಕೊಪ್ಪದಲ್ಲಿ ಒಂದೆರಡು ಸರ್ಕಾರಿ ಕಲ್ಲಿನ ಬಾವಿ ಬಿಟ್ಟರೆ ಬಾವಿಗಳಿಲ್ಲ. ಬಲಾಢ್ಯರು ಈ ರೀತಿ ಸರ್ಕಾರಿ ಬಾವಿಗಳನ್ನು ಮುಚ್ಚಿ ಆ ಜಾಗವನ್ನು ತಮ್ಮ ಸ್ವಾದೀನಕ್ಕೆ ಪಡೆದುಕೊಂಡರೆ ಇಲ್ಲಿನ ಗ್ರಾಮಸ್ಥರ ಕಥೆಯೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಅಧಿಕಾರಿಗಳೇ ಇತ್ತ ಗಮನ ಹರಿಸಿ :

ಒಂದು ಕಲ್ಲಿನ ಬಾವಿ ತೆಗೆಸಬೇಕೆಂದರೆ ಸುಮಾರು ಎರಡ್ಮೂರು ಲಕ್ಷ ಹಣಬೇಕು. ಜೊತೆಗೆ ಗ್ರಾಮ ಪಂಚಾಯತಿಯ ಜಾಗವಿರಬೇಕು‌. ಸುಮಾರು ಹತ್ತಾರೂ ವರ್ಷಗಳ ಕಾಲ ಮಾವಿನಕೊಪ್ಪ ಗ್ರಾಮಸ್ಥರ ಜೀವ ಉಳಿಸಿರುವ ಸರ್ಕಾರಿ ಬಾವಿಯನ್ನು ಮುಚ್ಚಿದರೆ ಇಲ್ಲಿನ ಸಾರ್ವಜನಿಕರ ಗತಿಯೇನು? ಎಂದು ಅವರು ಪ್ರಶ್ನಿಸಿದ್ದು, ಹೊಸನಗರ ತಹಸೀಲ್ದಾರ್ ಭರತ್‌ರಾಜ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಪಿಡಿಒ ರವಿ ಹಾಗೂ ಆಡಳಿತಾಧಿಕಾರಿಗಳು ತಕ್ಷಣ ಬಾವಿ ಮುಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ನೊಂದು ಬಾವಿಯನ್ನು ಗ್ರಾಮ ಪಂಚಾಯತಿಯವರು ವಶಪಡಿಸಿಕೊಂಡು ಸುತ್ತ ಬೇಲಿ ಹಾಕಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಂಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>