ರಿಪ್ಪನ್ಪೇಟೆ : ಮನುಷ್ಯರಾದ ಪ್ರತಿಯೊಬ್ಬರು ನಾವು ದೇವರ ಮೇಲೆ ಶ್ರದ್ದೆ ಭಕ್ತಿಯಿಟ್ಟು ಅವನನ್ನು ಉಪಾಸನೆ ಮಾಡಿ ದೇವರ ಸಾಮಿಪ್ಯವನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಸುದರ್ಶನ್ ಆಚಾರ್ಯ ಹೇಳಿದರು.
ರಿಪ್ಪನ್ಪೇಟೆಯ ಜಿಎಸ್ಬಿ ಸಮಾಜ ಮಂದಿರದಲ್ಲಿ ಆಯೋಜಿಸಲಾದ ಋಗುಪಾಕರ್ಮ ಕಾರ್ಯಕ್ರಮದಲ್ಲಿ ಹೋಮ ಹವನ ಕಾರ್ಯಕ್ರಮ ನೇರವೇರಿಸಿ ಜನಿವಾರ ಧಾರಣೆ ಮಾಡಿಸಿ ಲೋಕಕಲ್ಯಾಣಕ್ಕಾಗಿ ಮತ್ತು ಸಂವೃದ್ಧವಾಗಿ ಮಳೆ ಬೆಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸಿ ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಧಾರ್ಮಿಕ ಆಚರಣೆಗಳಿಗೆ ಮಹತ್ವ ನೀಡಬೇಕು. ಯಜ್ಞೋಪವಿತ ಧಾರಣೆಯನ್ನು ಕೇವಲ ವಿಶೇಷ ದಿನಗಳಿಗೆ ಸೀಮಿತಗೊಳಿಸದೆ ಪ್ರತಿನಿತ್ಯ ಶ್ರದ್ದೆಯಿಂದ ಆಚರಿಸುವ ಮೂಲಕ ನಮ್ಮ ಹಿರಿಯರು ನೀಡಿರುವ ಸಂಸ್ಕಾರ ಮತ್ತು ಪರಂಪರೆಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಜೆ.ಎಸ್.ಬಿ.ಸಮಾಜದ ಅಧ್ಯಕ್ಷ ಗಣೇಶ ಕಾಮತ್, ಉಮೇಶ್ಭಟ್, ಹರೀಶ ಶಂಕರ ಸರಾಫ್, ಹರೀಶ್ಪ್ರಭು, ಎಂ.ಆರ್.ಭಟ್, ಜೆ.ರಾಧಾಕೃಷ್ಣ, ರಾಜಾರಾಂ ಬಾಳಿಗ, ಇನ್ನಿತರ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

