ಒಕ್ಕಲಿಗರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ ಅಧ್ಯಕ್ಷ ಚುನಾವಣೆಯಲ್ಲಿ ಪುನರಾಯ್ಕೆ

0 435

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘವನ್ನು ಸಮಾಜದ ಹಲವು ಹಿರಿಯರೊಂದಿಗೆ ಚರ್ಚಿಸಿ ಸಮಾಜ ಭಾಂದವರನ್ನು ಸಂಘಟಿಸುವುದರೊಂದಿಗೆ ಕಳೆದ ಮೂವತ್ತು ವರ್ಷಗಳಿಂದಲೂ ಸಮಾಜದ ಶ್ರೇಯೋಭಿವೃದ್ಧಿ ಶ್ರಮಿಸಿದ ತಾಲ್ಲೂಕು ಒಕ್ಕಲಿಗ ಸಮಾಜವನ್ನು ಸ್ಥಾಪಿಸುವುದರೊಂದಿಗೆ ಸಂಸ್ಥಾಪಕ ಅಧ್ಯಕ್ಷರಾಗಿ ಜನಾನುರಾಗಿಯಾದ ಎಂ.ಬಿ.ಲಕ್ಷ್ಮಣಗೌಡ ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ ತಮ್ಮ ಬೆಂಬಲಿತ 19 ಜನ ನಿರ್ದೇಶಕರು ಆಯ್ಕೆಯಾಗುವುದರೊಂದಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಸಮಾಜದ ಸಂಘಟನೆಯೊಂದಿಗೆ ಸಾಗರ ರಸ್ತೆಯಲ್ಲಿ ಸರ್ಕಾರದಿಂದ ಎರಡು ಎಕರೆ ಜಾಗವನ್ನು ಮಂಜೂರಾತಿ ಮಾಡಿಸಿಕೊಳ್ಳುವುದರೊಂದಿಗೆ ಸಮಾಜದವರ ಮತ್ತು ಸರ್ಕಾರದಿಂದ ಹಣವನ್ನು ತರುವುದರೊಂದಿಗೆ ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕುವೆಂಪು ಸಭಾಭವನವನ್ನು ನಿರ್ಮಿಸಿ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ.

ಇವರ ಸಂಘಟನಾತ್ಮಕ ಬೆಳವಣಿಗೆಯನ್ನು ಸಹಿಸಿಕೊಳ್ಳದೇ ಹಲವರು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಬಾರಿ ಪ್ರಯತ್ನ ಸಹ ನಡೆದರೂ ಕೂಡಾ ಯಾವುದನ್ನು ಲೆಕ್ಕಿಸದೇ ಸಮಾಜದ ನಿರ್ದೇಶಕರು ಕೈ ಬಿಡದೇ ಎಂ.ಬಿ.ಲಕ್ಷ್ಮಣಗೌಡರ ತಂಡವನ್ನು ಬೆಂಬಲಿಸಿ ಅಧ್ಯಕ್ಷ ಪಟ್ಟವನ್ನು ನೀಡಿರುವುದು ಸಾಕ್ಷಿಯಾಗಿದೆ.

ಒಟ್ಟಾರೆಯಾಗಿ ತಾಲ್ಲೂಕು ಒಕ್ಕಲಿಗರ ಸಂಘದ ಸಾರಥ್ಯವನ್ನು ಪಡೆಯುವ ಮೂಲಕ ಇನ್ನೂ ಹೆಚ್ಚು ಸಮಾಜದ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವ ತುಡಿತವನ್ನು ಮಾಧ್ಯಮದವರ ಬಳಿ ವ್ಯಕ್ತಪಡಿಸಿದ ಅವರು, ನಮ್ಮ 19 ಜನ ಪದಾಧಿಕಾರಿಗಳು ನನ್ನ ಈ ಪ್ರಯತ್ನಕ್ಕೆ ಬೆಂಬಲಿಸಿದಲ್ಲಿ ಮಾದರಿ ಸಮಾಜವನ್ನಾಗಿಸುವ ಮಹಾದಾಸೆ ನನ್ನದಾಗಿದೆ ಎಂದರು.

Leave A Reply

Your email address will not be published.

error: Content is protected !!