ಸಂಸದ ಬಿವೈಆರ್ ರವರಿಗೆ ಹುಟ್ಟುಹಬ್ಬದ ಶುಭಕೋರಲು ಹರಿದು ಬಂತು ಜನಸಾಗರ

0 42

ಶಿಕಾರಿಪುರ : ಇಂದು ಸಂಸದ ಬಿ ವೈ ರಾಘವೇಂದ್ರ ರವರ 50ನೇ ಹುಟ್ಟು ಹಬ್ಬವಾಗಿದ್ದು, ಸಂಸದ ಬಿ ವೈ ರಾಘವೇಂದ್ರ, ಶಿಕಾರಿಪುರ ತಾಲ್ಲೂಕಿನ ಶಾಸಕ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಪಟ್ಟಣದ ಶ್ರೀ ಹುಚ್ಚರಾಯ (ಬ್ರಾಂತೇಶ) ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಅಂಗವಿಕಲಿರಿಗೆ ಮೂರು ಚಕ್ರದ ಮೊಪೆಡ್ ಬೈಕ್ ವಿತರಣೆ ಮಾಡಿದರು.

ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಅಲ್ಲಿ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣು ಕೊಡುವುದರ ಮೂಲಕ ವಿಶೇಷ ರೀತಿಯ ಹುಟ್ಟುಹಬ್ಬ ಆಚರಿಸಿದ ಅವರು, ನಂತರ ಪಟ್ಟಣದ ಮಾಳೇರ ಕೇರಿಯಲ್ಲಿರುವ ಪಕ್ಷದ ಕಛೇರಿಗೆ ಆಗಮಿಸುತ್ತಿದ್ದಂತೆಯೇ ಹುಟ್ಟು ಹಬ್ಬದ ಶುಭಕೋರಲೆಂದು ಆಗಮಿಸಿದ್ದ ಅಪಾರ ಅಭಿಮಾನಿಗಳು ವಿವಿಧ ರೀತಿಯ ಹಾರ, ಹೂಗುಚ್ಛ ನೀಡಿ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಜನ್ಮ ದಿನವಾದ ಇಂದು ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿ ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ವಿವರಿಸಿದ್ದೇನೆ.  ನನ್ನ ಹುಟ್ಟುಹಬ್ಬದ ಸಾರ್ಥಕ ಘಳಿಗೆಯಿದು. ಇಂಥದ್ದೊಂದು ಸೇವೆಯ ಶಕ್ತಿ ಮತ್ತು ಅವಕಾಶ ಕೊಟ್ಟಿದ್ದಕ್ಕೆ ನಾನು ಭಗವಂತನಿಗೆ ಅಭಿಮಾನಿಗಳಿಗೆ ಹಾಗೂ ನಮ್ಮ ಪಕ್ಷದ ಮುಖಂಡರಿಗೆ  ಕೃತಜ್ಞನಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರರವರ ಪತ್ನಿ ತೇಜಸ್ವಿನಿ ರಾಘವೇಂದ್ರ, ಸಂಸದರ ತಂದೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು, ಸಹೋದರ ಹಾಗೂ ತಾಲ್ಲೂಕಿನ ಶಾಸಕ ಬಿ ವೈ ವಿಜಯೇಂದ್ರರವರು ಮಾಜಿ ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ ಇದ್ದರು.

Leave A Reply

Your email address will not be published.

error: Content is protected !!