ಕುಡುಕರಲ್ಲಿ ಜಾಗೃತಿ ಮೂಡಿಸಿದ ಮತದಾನ ಜಾಗೃತಿ ಬೀದಿ ನಾಟಕ
ರಿಪ್ಪನ್ಪೇಟೆ: ಇಲ್ಲಿನ ಪ್ರಯಾಣಿಕರ ತಂಗುದಾಣದಲ್ಲಿ ಶಿವಮೊಗ್ಗ ಕಲಾ ತಂಡದವರು ಮತದಾನ ಜಾಗೃತಿ ಬೀದಿ ನಾಟಕ ಪ್ರದರ್ಶನದಲ್ಲಿ ಬಸ್ ನಿಲ್ದಾಣದಲ್ಲಿ ಕುಡಿದ ಮತ್ತಿನಲ್ಲಿ ಮಲಗಿದ್ದ ಬಡಿದ್ದೆಬಿಸಿದಂತಿತ್ತು.
ಲೋಕಸಭಾ ಚುನಾವಣೆಯ ಘೋಷಣೆಯ ಬೆನ್ನಲ್ಲೇ ಶಿವಮೊಗ್ಗ ನೆಹರೂ ಯುವ ಕೇಂದ್ರದ ಕಲಾತಂಡದವರು ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣದಲ್ಲಿ `ಮತದಾನ ಜಾಗೃತಿ ಬೀದಿ ನಾಟಕ’’ ಪ್ರದರ್ಶನದ ನೀಡಿದರು.
ಈ ಸಂದರ್ಭದಲ್ಲಿ ಇಲ್ಲಿನ ಬಸ್ ನಿಲ್ದಾಣದ ಪ್ರಯಾಣಿಕರ ಆಸನದಲ್ಲಿ ಹಗಲು ಕುಡುಕರು ಕುಡಿದ ಅಮಲಿನಲ್ಲಿ ಬೇಕಾಬಿಟ್ಟಿಯಾಗಿ ಮಲಗಿದರು. ಆದರೆ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರು ತಮ್ಮ ಸಾಮಾನು ಸರಜಾಮಗಳನ್ನು ಹಿಡಿದುಕೊಂಡು ಬಿಸಿಲಬೇಗೆಯಲ್ಲಿ ನಿಂತಿದ್ದು ಕಂಡುಬಂತು.
ಬೀದಿ ನಾಟಕವನ್ನು ಗ್ರಾಮದ ಹಿರಿಯ ಜೆ.ಎಸ್.ಚಂದ್ರಪ್ಪ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಸುಂದರೇಶ, ಪಿ.ರಮೆಶ್, ಪಿಡಿಓ ಮಧುಸೂದನ್, ಕಾರ್ಯದರ್ಶಿ ಮಧುಶ್ರೀ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.