ಕರ್ನಾಟಕದಲ್ಲಿ ಜೂನ್ 26ರಿಂದ ಮುಂಗಾರು ಅಬ್ಬರ ಹೆಚ್ಚಳ! 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Written by Koushik G K

Published on:

Karnataka Rain:ರಾಜ್ಯದ ಹಲವೆಡೆ ಮಳೆ ಮತ್ತೆ ಅಬ್ಬರಿಸಲಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್ 26ರಿಂದ ಮುಂಗಾರು ತನ್ನ ಪ್ರಬಲ ಸ್ವರೂಪ ತೋರಿಸಲಿದೆ. ಈ ಹಿನ್ನೆಲೆಯಲ್ಲಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now

ಮುಂಗಾರು ಅಬ್ಬರ ಹೆಚ್ಚಾಗಲಿರುವ ಜಿಲ್ಲೆಗಳು:

  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಉಡುಪಿ
  • ಶಿವಮೊಗ್ಗ
  • ಕೊಡಗು
  • ಚಿಕ್ಕಮಗಳೂರು
  • ಹಾಸನ
  • ಧಾರವಾಡ
  • ಬೆಳಗಾವಿ
  • ಕಲಬುರಗಿ
  • ಗದಗ

ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಪ್ರದೇಶಗಳು

ಕಳೆದ ಕೆಲ ದಿನಗಳಿಂದ ಹಲವೆಡೆ ಮಳೆಯ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾಗಲಿದೆ. ಇತ್ತೀಚೆಗೆ ಮಳೆಯಾಗಿರುವ ಪ್ರದೇಶಗಳು:

ಕದ್ರಾ, ಕ್ಯಾಸಲ್ ರಾಕ್, ಸಿದ್ದಾಪುರ, ಮೂಡುಬಿದಿರೆ, ಕೊಟ್ಟಿಗೆಹಾರ, ಶೃಂಗೇರಿ, ಭಾಗಮಂಡಲ, ಗುಬ್ಬಿ, ಕಮ್ಮರಡಿ, ಮಾಣಿ, ಉಪ್ಪಿನಂಗಡಿ, ಶಕ್ತಿನಗರ, ಮಂಗಳೂರು, ಯಲ್ಲಾಪುರ, ಗೇರುಸೊಪ್ಪ, ಸುಳ್ಯ, ಪುತ್ತೂರು, ಮಂಕಿ, ಬಂಟವಾಳ, ಕುಂದಾಪುರ, ಅಥಣಿ, ಲೋಂಡಾ, ಕೊಪ್ಪ, ಜೋಯ್ಡಾ, ಅಂಕೋಲಾ, ಜಯಪುರ, ಕಳಸ…

ಹವಾಮಾನ ಇಲಾಖೆ ಎಚ್ಚರಿಕೆ

ಹವಾಮಾನ ಇಲಾಖೆ ಈ ಜಿಲ್ಲೆಗಳ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದು, ಪ್ರವಾಸಕ್ಕೆ ಹೋಗಲು ಯೋಜನೆ ಹೊಂದಿರುವವರು ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ. ನದಿ ಪಾತ್ರಗಳಲ್ಲಿ ಪ್ರವಾಹದ ಸಾಧ್ಯತೆಯೂ ಇರುವುದರಿಂದ, ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಅವಶ್ಯಕ.

Read more:ಸರ್ಕಾರಿ ನೌಕರಿ ಪಡೆಯುವವರಿಗೆ ಬಿಗ್ ನ್ಯೂಸ್ ! ಸಿಗಲ್ಲ ಈ ಲಾಭ !

Leave a Comment