ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ನಿರೀಕ್ಷಿತ ಮತ್ತು ಐತಿಹಾಸಿಕ ಮಹತ್ವದ ಮೂಲಸೌಕರ್ಯ ಯೋಜನೆಯಾದ ಸಿಗಂದೂರು ಕೇಬಲ್ ಸ್ಟೇಡ್ ಸೇತುವೆ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಸಿಗಂದೂರು ಕ್ಷೇತ್ರವನ್ನು ಮುಖ್ಯಭಾಗದ ಸಾಗರ ಹಾಗೂ ಸುತ್ತಲಿನ ಪ್ರದೇಶಗಳಿಗೆ ಸಂಪರ್ಕಗೊಳಿಸುವ ಈ ಸೇತುವೆ ಈಗ ಸಂಪೂರ್ಣ ಹಂತಕ್ಕೆ ತಲುಪಿದೆ.
2.44 ಕಿಲೋಮೀಟರ್ ಉದ್ದದ ಈ ಸೇತುವೆ ಕರ್ನಾಟಕದ ಅತೀ ಉದ್ದದ ಕೇಬಲ್ ಸ್ಟೇಡ್ ಸೇತುವೆಯಾಗಿದೆ. ಇದು ಕೇವಲ ಒಂದು ಬೃಹತ್ ನಿರ್ಮಾಣವಲ್ಲ, ಮಲೆನಾಡಿನ ಜನತೆಗಾಗಿ ಸಂಪರ್ಕ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ನೂತನ ದಾರಿ ತೆರೆದಿದೆ.
ಇತ್ತೀಚೆಗೆ ಸೇತುವೆಯ ಶಕ್ತಿ ಪರಿಶೀಲನೆಗಾಗಿ ತಂತ್ರಜ್ಞರ ತಂಡ ಲೋಡ್ ಟೆಸ್ಟ್ (ಭಾರ ಪರೀಕ್ಷೆ) ನಡೆಸಿದ್ದು, ಆರಂಭದಲ್ಲಿ 25 ಟನ್ ಭಾರವನ್ನು ಸೇತುವೆಯ ಮೇಲ್ಮೈಯಲ್ಲಿ ಇಡಲಾಗಿದೆ. ನಂತರ ಇನ್ನೊಂದು 25 ಟನ್ ಅನ್ನು ಸೇರಿಸಿ ಹೀಗೆ ಹಂತಹಂತವಾಗಿ ಸುಮಾರು 100 ಟನ್ ಭಾರವನ್ನು ಸೇತುವೆಯ ವಿಭಿನ್ನ ಭಾಗಗಳಲ್ಲಿ ಹಾಕಿ ಪರೀಕ್ಷೆ ನಡೆಸಲಾಯಿತು.
ಈ ಎಲ್ಲಾ ಹಂತಗಳಲ್ಲಿ ಸೇತುವೆ ಸಂಪೂರ್ಣವಾಗಿ ಪಾಸಾಗಿದ್ದು, ತಂತ್ರಜ್ಞರಿಂದ ಪ್ರಾಥಮಿಕ ಮಟ್ಟದ ಪ್ರಮಾಣಪತ್ರ ಲಭಿಸಿದೆ. ಆದರೂ ಒಂದು ಅಂತಿಮ ತಾಂತ್ರಿಕ ಪರೀಕ್ಷೆ ಮುಂದಿನ ವಾರ ನಡೆಯಲಿದೆ. ಈ ಪರೀಕ್ಷೆಯು ಯಶಸ್ವಿಯಾದ ಬಳಿಕ ಸೇತುವೆ ಉದ್ಘಾಟನೆ ದಿನಾಂಕವನ್ನು ಅಧಿಕೃತವಾಗಿ ನಿಗದಿಪಡಿಸಲಾಗುವುದು.
ಈ ಐತಿಹಾಸಿಕ ಸೇತುವೆಯ ಶಂಕುಸ್ಥಾಪನೆ ಫೆಬ್ರವರಿ 2018ರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಂದ ನೆರವೇರಿತ್ತು. ಅದರ ಬಳಿಕ ಯೋಜನೆಯು ನಿರಂತರವಾಗಿ ಮುನ್ನಡೆದು, ಇಂದು ಅದರ ಅಂತಿಮ ಹಂತದಲ್ಲಿದೆ.
ಈ ಉದ್ಘಾಟನಾ ಸಮಾರಂಭವನ್ನು ಜೂನ್ 2025ರ ಅಂತ್ಯದೊಳಗೆ ನಿಗದಿ ಮಾಡಲಾಗಿದೆ, ಹಾಗೂ ಕಾರ್ಯಕ್ರಮದಲ್ಲಿಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತುನಿತಿನ್ ಗಡ್ಕರಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಿಗಂದೂರು ಸೇತುವೆಯಲ್ಲಿ ಲೋಡ್ ಟೆಸ್ಟಿಂಗ್ ಪೂರ್ಣ!ಸಂಪರ್ಕದ ಹೊಸ ಅಧ್ಯಾಯದ ಪ್ರಾರಂಭಕ್ಕೆ ಕ್ಷಣಗಣನೆ !
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.