ಸಿಗಂದೂರು ಸೇತುವೆ : ದೇಶದ 2ನೇ ಉದ್ದದ ಕೇಬಲ್ ಬ್ರಿಡ್ಜ್‌ ಉದ್ಘಾಟನೆಗೆ ಕ್ಷಣಗಣನೆ

Written by Koushik G K

Published on:

Siganduru Bridge Opening Date : ಸಿಗಂದೂರು – ಅಂಬಾರಗೋಡ್ಲು – ಕಳಸವಳ್ಳಿ ನಡುವಿನ ಐತಿಹಾಸಿಕ ನೂತನ ಸೇತುವೆ ದೇಶದಲ್ಲಿಯೇ ಎರಡನೇ ಉದ್ದದ ಸೇತುವೆ ಎನ್ನುವ ಹೆಗ್ಗಳಿಕೆಯನ್ನು ಗಳಿಸಲಿದೆ. ಇದರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಸೇತುವೆ ಸ್ಥಳಕ್ಕೆ ಕೇಂದ್ರ ಮತ್ತು ರಾಜ್ಯದ ಪ್ರಮುಖ ನಾಯಕರು ಭೇಟಿ ನೀಡಿದ್ದು, ಪ್ರಧಾನಿ ಮೋದಿ ಅವರ ಆಗಮನದ ನಿರೀಕ್ಷೆಯೂ ವ್ಯಕ್ತವಾಗಿದೆ.

WhatsApp Group Join Now
Telegram Group Join Now
Instagram Group Join Now

ಸಂಸದ ಬಿ. ವೈ. ರಾಘವೇಂದ್ರ, ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ, ಶಿಕಾರಿಪುರ ಕ್ಷೇತ್ರದ ಶಾಸಕ ಬಿ. ವೈ.ವಿಜಯೇಂದ್ರ ಇಂದು ಬೆಳಿಗ್ಗೆ ಈ ಸೇತುವೆಯ ಸ್ಥಳಕ್ಕೆ ಭೇಟಿ ನೀಡಿ ಪೂರ್ವ ತಯಾರಿಗಳನ್ನು ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಭಾಗವಹಿಸಿದ್ದರು.

ಸೇತುವೆ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಉಪಸ್ಥಿತಿಯನ್ನು ಅಪೇಕ್ಷಿಸಿ, ಆಧಿಕೃತ ಆಹ್ವಾನವನ್ನು ನೀಡಿ ಪೂರ್ವಸಿದ್ಧತೆ ನಡೆಯುತ್ತಿದೆ.

ಈ ಸೇತುವೆ ಪೂರ್ಣಗೊಳ್ಳುವುದರಿಂದ ಸಿಗಂದೂರು ಮತ್ತು ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಿಗೆ ಸುಗಮ ಸಂಚಾರ ವ್ಯವಸ್ಥೆ ಸಾದ್ಯವಾಗಲಿದ್ದು, ವ್ಯಾಪಾರ-ವ್ಯವಹಾರಕ್ಕೂ ಹೊಸ ಜೀವಳ ನೀಡಲಿದೆ. ಸೇತುವೆ ಉದ್ಘಾಟನೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.

Read More :Karnataka PM-Kisan – ಈ ದಿನ ಕೈ ಸೇರಲಿದೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20ನೇ ಕಂತು !

Leave a Comment