Breaking News : ಜುಲೈ 14 ರಿಂದ ಸಿಗಂದೂರು ಸೇತುವೆ ಸಂಚಾರಕ್ಕೆ ಮುಕ್ತ – ಸಂಸದ ಬಿ .ವೈ ರಾಘವೇಂದ್ರ

Written by Koushik G K

Published on:

Siganduru Bridge opening Date :ಶಿವಮೊಗ್ಗ ಜಿಲ್ಲೆಯಲ್ಲಿ ಬಹು ನಿರೀಕ್ಷಿತ ಹಾಗೂ ಐತಿಹಾಸಿಕ ಮಹತ್ವದ ಮೂಲಸೌಕರ್ಯ ಯೋಜನೆಯಾದ ಸಿಗಂದೂರು ಕೇಬಲ್ ಸ್ಟೇಡ್ ಸೇತುವೆ ಈಗ ಉದ್ಘಾಟನೆಗೆ ಸಿದ್ಧವಾಗಿದೆ. ಮಲೆನಾಡಿನ ಹೃದಯಭಾಗದ ಸಿಗಂದೂರು ಕ್ಷೇತ್ರವನ್ನು ಸಾಗರ ಸೇರಿದಂತೆ ಸುತ್ತಲಿನ ಪ್ರಮುಖ ಪ್ರದೇಶಗಳಿಗೆ ನೇರ ಸಂಪರ್ಕಗೊಳಿಸುವ ಈ ಸೇತುವೆ ಜುಲೈ 14ರಿಂದ ಸಾರ್ವಜನಿಕರಿಗೆ ಪ್ರವೇಶಕ್ಕೆ ತೆರೆಯಲಾಗುತ್ತಿದೆ.

WhatsApp Group Join Now
Telegram Group Join Now
Instagram Group Join Now

2.44 ಕಿಲೋಮೀಟರ್ ಉದ್ದದ ಈ ಸೇತುವೆ ಕರ್ನಾಟಕದ ಅತೀ ಉದ್ದದ ಕೇಬಲ್ ಸ್ಟೇಡ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಕೇವಲ ಒಂದು ತಾಂತ್ರಿಕ ಸಾಧನೆಯಷ್ಟೇ ಅಲ್ಲ, ಮಲೆನಾಡಿನ ಜನತೆಗೆ ಸಂಪರ್ಕ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳ ಹೊಸ ಮಾರ್ಗವನ್ನು ಕಲ್ಪಿಸಲಿದೆ.

ಇತ್ತೀಚೆಗಷ್ಟೇ ಸೇತುವೆಯ ಶಕ್ತಿ ಪರೀಕ್ಷೆ (ಲೋಡ್ ಟೆಸ್ಟ್) ನಡೆಸಲಾಯಿತು. ತಂತ್ರಜ್ಞರ ತಂಡ ಪ್ರಾರಂಭದಲ್ಲಿ 25 ಟನ್ ಭಾರವನ್ನು ಸೇತುವೆಯ ಮೇಲ್ಮೈಯಲ್ಲಿ ಇಟ್ಟಿದ್ದು, ನಂತರ ಹಂತ ಹಂತವಾಗಿ 100 ಟನ್‌ವರೆಗೆ ಭಾರವನ್ನು ವಿವಿಧ ಭಾಗಗಳಲ್ಲಿ ಇಟ್ಟು ಶಕ್ತಿ ಪರಿಶೀಲನೆ ನಡೆಸಿತು. ಎಲ್ಲಾ ಹಂತಗಳಲ್ಲೂ ಸೇತುವೆ ಯಶಸ್ವಿಯಾಗಿ ಪಾಸಾಗಿ ತಂತ್ರಜ್ಞರಿಂದ ಪ್ರಾಥಮಿಕ ಪ್ರಮಾಣಪತ್ರವೂ ಪಡೆದುಕೊಂಡಿದೆ.

ಈ ಸೇತುವೆ ಮೂಲಕ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಪ್ರಯಾಣಿಸಲು ಹೆದರುವ ಅವಶ್ಯಕತೆಯಿಲ್ಲ – ಜನರು ಸುಲಭವಾಗಿ ಹಾಗೂ ಸುರಕ್ಷಿತವಾಗಿ ತಲುಪುವ ಅವಕಾಶವನ್ನು ಹೊಂದಿರುತ್ತಾರೆ.

ಇದೇ ಜುಲೈ 14ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಸೇತುವೆ ಉದ್ಘಾಟನೆ ನಡೆಯಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Read More

Leave a Comment