ಕೌಟುಂಬಿಕ ಕಲಹ: 20 ದಿನದ ಹಿಂದೆ ಆತ್ಮಹ*ತ್ಯೆಗೆ ಯತ್ನಿಸಿದ್ದ ಪತ್ನಿ ಸಾ*ವು, ಪತಿ ಬಂಧನ

Written by Koushik G K

Published on:

ಆನಂದಪುರ:ದಂಪತಿಗಳ ನಡುವೆ ನಡೆದ ಗಂಭೀರ ಕೌಟುಂಬಿಕ ಕಲಹ ದುರಂತದಲ್ಲಿ ಅಂತ್ಯ ಕಂಡಿದ್ದು, ಪತ್ನಿಯ ಸಾ*ವು ನಡೆದಿದೆ. ಆತ್ಮಹ*ತ್ಯೆಗೆ ಯತ್ನಿಸಿ 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಗುರುವಾರ ಕೊನೆಯುಸಿರೆಳೆದಿದ್ದು, ಘಟನೆಯ ಬಳಿಕ ಪತಿಯನ್ನ ಪೊಲೀಸರು ಬಂಧಿಸಿದ್ದಾರೆ

WhatsApp Group Join Now
Telegram Group Join Now
Instagram Group Join Now

ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಕವಳ್ಳಿ ಗ್ರಾಮದ ನಿವಾಸಿ ಗಿರಿಜಾ (38) ಎಂಬವರು ಸಾ*ವಾಗಿದ್ದು, ಪತಿ ಶ್ರೀಕಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಗಿರಿಜಾ ಕಳೆದ 20 ದಿನಗಳ ಹಿಂದೆ ಮನೆಯಲ್ಲೇ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಜು.17 ರಂದು ಸಾ*ವಿಗೀಡಾಗಿದ್ದಾರೆ .

ಅಂತ್ಯ ಸಂಸ್ಕಾರದ ನಂತರ, ಪತಿ ಶ್ರೀಕಾಂತ್ ಅವರನ್ನು ಆನಂದಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೆಟ್ಟಿಹಳ್ಳಿ ವನ್ಯಜೀವಿಧಾಮದ ಗಡಿ ಪರಿಷ್ಕರಣೆಗೆ ಸಚಿವ ಸಂಪುಟದ ಅಸ್ತು: ಅರಣ್ಯ ಸಚಿವ ಈಶ್ವರ ಖಂಡ್ರೆ

Leave a Comment