ಗವಟೂರು ಜಾತ್ರೋತ್ಸವ – ಸತ್ಕಾರ್ಯಗಳಿಗೆ ದಾನ ಮಾಡುವುದು ಪುಣ್ಯದ ಕೆಲಸ ; ಮಳಲಿ ಶ್ರೀ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಬಾಳುವುದಾದರೆ ಸಮುದ್ರದಂತೆ ಬಾಳಿ. ಬೇಕಾದವರು ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇತಿಹಾಸ ಪ್ರಸಿದ್ಧ ಗವಟೂರು ಶ್ರೀಹೊಳೆಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮತ್ತು ರುದ್ರಾಭಿಷೇಕ ಧರ್ಮಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ಕಣ್ಣು ಚನ್ನಾಗಿದ್ದರೆ ಇಡೀ ಜಗತ್ತು ನಮಗೆ ಚನ್ನಾಗಿ ಕಾಣುತ್ತದೆ.ಅದರೆ ನಮ್ಮ ನಾಲಿಗೆ ಒಳ್ಳೆಯದಾಗಿದ್ದರೆ ಇಡೀ ಜಗತ್ತಿಗೆ ನಾವು ಚನ್ನಗಿ ಕಾಣುತ್ತೇವೆ. ಯಥಾ ದೃಷ್ಠಿ ತಥಾ ಸೃಷ್ಟಿ ಮತ್ತು ನಾಲಿಗೆ ಒಳ್ಳೆಯದಾದರೆ ನಾಡಲ್ಲಾ ಒಳ್ಳೆಯದು ಎಂಬ ಈ ಎರಡು ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಜಗದ್ಗುರು ರೇಣುಕಾಚಾರ್ಯರು ಸಿದ್ದಾಂತ ಶಿಖಾಮಣಿಯಲ್ಲಿ ದಶಧರ್ಮಸೂತ್ರಗಳಲ್ಲಿ ಒಂದಾದ ದಾನದ ಮಹತ್ವವನ್ನು ಹೇಳುವಾಗ ‘ಸಹಜ ದಾನಂ ಉತ್ಕಷ್ಟ ದಾನಂ’ ಎಂದಿದ್ದಾರೆ. ಹಾಗಾಗಿ ಸತ್ಕಾರ್ಯಗಳಿಗೆ ದಾನವನ್ನು ಮಾಡುವುದು ಒಳಿತೆಂದರು.

ದೇವಸ್ಥಾನ ಸೇವಾ ಸಮಿತಿ ಉಲ್ಲಾಸ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದುಂಡರಾಜಪ್ಪಗೌಡ, ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಅರುಣ್, ಕುಬೇರಪ್ಪ ಕೃಷ್ಣಯ್ಯಶೆಟ್ಟಿ ಜನಾರ್ಧನ್, ಪರಮೇಶ, ರಾಜು, ಜಿ.ಡಿ.ಮಲ್ಲಿಕಾರ್ಜುನ, ನಾಗೇಂದ್ರ ಹಾಜರಿದ್ದರು.

Leave a Comment