ರಾ.ಹೆ. ಮೇಲೆ ಅಡ್ಡಲಾಗಿ ಬಿದ್ದ ಮರ, ಸಾಲುಗಟ್ಟಿ ನಿಂತ ವಾಹನಗಳು !

Written by malnadtimes.com

Published on:

HOSANAGARA | ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ, ಹೊಸನಗರ ತಾಲೂಕಿನ ಮೂಲೆಗದ್ದೆ ಮಠದ ಬಳಿ ರಸ್ತೆಗೆ ಬೃಹತ್ ಮರ ಅಡ್ಡಲಾಗಿ ಬಿದ್ದ ಪರಿಣಾಮ ಸಾಗರ, ಮಾಸ್ತಿಕಟ್ಟೆ, ಕುಂದಾಪುರ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತು.

WhatsApp Group Join Now
Telegram Group Join Now
Instagram Group Join Now

ರಾಷ್ಟ್ರೀಯ ಹೆದ್ದಾರಿ 766ಸಿಯಲ್ಲಿ ಈ ಘಟನೆ ನಡೆದಿದ್ದು ಮಂಗಳೂರು, ಉಡುಪಿ, ಕುಂದಾಪುರ ತೆರಳಲು ವಾಹನ ಸವಾರರು ಪರದಾಡಬೇಕಾಯಿತು.

ಗಂಟೆಗಟ್ಟಲೇ ವಾಹನಗಳು ನಿಂತಲೇ ನಿಂತಿದ್ದವು, ಅರಣ್ಯಾಧಿಕಾರಿಗಳು ಮರ ತೆರವು ಕಾರ್ಯಾಚರಣೆ ನಡೆಸಿದರು‌.

ಬೆಳಗಿನಜಾವ ನಾಲ್ಕು ಗಂಟೆಯಿಂದ ವಾಹನಗಳು ನಿಂತಲೇ ನಿಂತಿದ್ದವು, ರಸ್ತೆ ಸಂಚಾರ ಸ್ಥಗಿತ ಹಿನ್ನಲೆಯಲ್ಲಿ ಬದಲಿ ರಸ್ತೆ ಹುಡುಕಿ ವಾಹನಗಳು ಚಲಾಯಿಲಿದ ಘಟನೆ ನಡೆದಿದೆ.

Leave a Comment