ಕೃಷಿ ಹೊಂಡ, ಕೆರೆಗಳ ಅಪಾಯದ ಬಗ್ಗೆ ಜಾಗೃತೆಯಿರಲಿ ; ಸಚಿನ್ ಹೆಗಡೆ

Written by Mahesha Hindlemane

Published on:

ಹೊಸನಗರ ; ಏಪ್ರಿಲ್, ಮೇ ತಿಂಗಳಲ್ಲಿ ಶೆಕೆ, ಬಿಸಿಲು ಹೆಚ್ಚಾಗಿದ್ದು ಮಕ್ಕಳಿಗೆ ಶಾಲೆಗೆ ರಜೆಯು ಆರಂಭವಾಗಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಸುದ್ಧಿ ಎಂದರೆ ಕೃಷಿ ಹೊಂಡಕ್ಕೆ ಈಜಲು ಹೋಗಿ ಮಕ್ಕಳು, ಕೃಷಿ ಕೂಲಿಗಳು ಹಾಗೂ ಜಾನುವಾರುಗಳು ಆಯತಪ್ಪಿ ಬಿದ್ದು ಅಪಘಾತವಾಗಿದೆ ಎಂಬ ಸುದ್ಧಿ ಕೇಳುವ ಮುಂಚೆಯೇ ಜನರು ಜಾಗೃತರಾಗಿರಬೇಕೆಂದು ಹೊಸನಗರದ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೆಶಕ ಸಚಿನ್ ಹೆಗಡೆಯವರು ಜನರನ್ನು ರೈತರನ್ನು ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಕೃಷಿ ಇಲಾಖೆ ತಮ್ಮ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ರೈತರು ತಮ್ಮ ಕೃಷಿ ಜಮೀನಿನಲ್ಲಿ ಕೃಷಿ ಹೊಂಡ, ಕೆರೆ, ಕೃಷಿ ಬಾವಿ ಹೊಂದಿರುವ ಎಲ್ಲ ರೈತರು ಸುತ್ತಲೂ ಬಲವಾದ ಬೇಲಿಯನ್ನು ಅಳವಡಿಸಿ. ಸಾಧ್ಯವಾಗದಿದ್ದಲ್ಲಿ ಮುಳ್ಳುಗಂಟಿಗಳನ್ನು ಪೇರೆಸಿಟ್ಟು ಬೇಲಿಯಂತೆ ಅಳವಡಿಸಿ ಬೇಲಿಯ ಬದಲಾಗಿ ಶೇಡ್‌ನೆಟ್ ಅಥವಾ ಹಳೆಯ ಸೀರೆಗಳನ್ನು ಬಳಸಬಹುದು.

ನಿಮ್ಮ ಕೆರೆಯು ಸಾರ್ವಜನಿಕರು ಓಡಾಡುವ ಜಾಗದಲ್ಲಿದ್ದರೆ ಕಡ್ಡಾಯವಾಗಿ ಬೇಲಿ ಮತ್ತು ಚಿಕ್ಕ ಎಚ್ಚರಿಕೆ ಬೋರ್ಡ್ ಅಳವಡಿಸಿ. ಸಾಮಾನ್ಯವಾಗಿ ಎಲ್ಲ ಕೃಷಿ ಹೊಂಡಗಳು ಇಳಿಜಾರಿನಿಂದ ಕೂಡಿದ್ದು ಹೊಂಡಕ್ಕೆ ಇಳಿದ ಯಾರೇ ಆಗಲಿ ಮೇಲೆ ಹತ್ತಿ ಬರಲು ಮೆಟ್ಟಿಲುಗಳಿರುವುದಿಲ್ಲ‌. ಆದ್ದರಿಂದ ಒಂದು ಹಗ್ಗವನ್ನಾಗಲಿ ಅಥವಾ ಹಳೆಯ ಬಿದಿರಿನ ಏಣಿಯನ್ನಾಗಲಿ ಇಳಿಜಾರಿಗೆ ಇಡಿ. ಹಳೆಯ ಟ್ಯೂಬ್‌ಗಳನ್ನು ತೇಲಿ ಬಿಡಬಹುದು ಹಗ್ಗವನ್ನು ಎಕ್ಸ್ ಮಾರ್ಕಿನಲ್ಲಿ ಕೃಷಿ ಹೊಂಡಕ್ಕೆ ಕಟ್ಟಬಹುದು. ಅಪಘಾತ ನಡೆದ ನಂತರ ಮರುಗುವುದಕ್ಕಿಂತ ಮೊದಲೇ ಎಚ್ಚರಿಕೆ ವಹಿಸುವುದು ಉತ್ತಮ ಎಂದರು.

Leave a Comment