Bele Vime : ತೋಟಗಾರಿಕೆ ಇಲಾಖೆ 2025-26ನೇ ಸಾಲಿಗೆ ಮರು ವಿನ್ಯಾಸಗೊಳಿಸಿರುವ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾರಿಗೆ ತಂದಿದ್ದು, ಇದರಡಿ ರೈತರು ಅಡಿಕೆ, ಕಾಳುಮೆಣಸು, ಮಾವು ಹಾಗೂ ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿಗೆ ಅಗತ್ಯ ದಾಖಲೆಗಳು:
- ಪ್ರಸಕ್ತ ಸಾಲಿನ ಪಹಣಿ (RTC)
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಆಧಾರ್ ಕಾರ್ಡ್
- ಸ್ವಯಂ ಘೋಷಿತ ಬೆಳೆ ವಿವರಗಳು
ಅರ್ಜಿ ಸಲ್ಲಿಸಬಹುದಾದ ಸ್ಥಳಗಳು: ರೈತರು ಸಮೀಪದ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗೆ ಕೊನೆಯ ದಿನಾಂಕ: ಜುಲೈ 31, 2025
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ತೋಟಗಾರಿಕೆ ಇಲಾಖೆ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಸಂಖ್ಯೆ:
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
- ಶಿವಮೊಗ್ಗ: 08182-279415 / 9900046087
- ಭದ್ರಾವತಿ: 08282-295029 / 9108252536
- ಶಿಕಾರಿಪುರ: 08187-223544 / 8310662972
- ಸೊರಬ: 08184-295112 / 9900461117
- ಸಾಗರ: 08183-295124 / 9449177200
- ತೀರ್ಥಹಳ್ಳಿ: 08181-228151 / 9108280642
- ಹೊಸನಗರ: 08185-295364 / 9591695327
ರೈತರು ಇದರ ಸದುಪಯೋಗವನ್ನು ಉಪಯೋಗಿಸಿಕೊಂಡು ತಮ್ಮ ಬೆಳೆಗಳಿಗೆ ಹವಾಮಾನ ಸಂಬಂಧಿತ ಅನಾಹುತಗಳ ವಿರುದ್ಧ ಭದ್ರತೆ ಪಡೆಯಬಹುದಾಗಿದೆ.
Read More :ರೈಲು ಪ್ರಯಾಣ ದರ ಏರಿಕೆ ಶಾಕ್! ಜುಲೈ 1ರಿಂದ ಟಿಕೆಟ್ ದುಬಾರಿ – ಇಲ್ಲಿದೆ ಹೊಸ ದರದ ವಿವರ

