ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನೀರುಪಾಲು !

0 42

ಮೂಡಿಗೆರೆ : ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಪಟ್ಟಣದ ಹೊರವಲಯದ ಹ್ಯಾಂಡ್ ಪೋಸ್ಟ್ ಬಳಿ ಶನಿವಾರ ನಡೆದಿದೆ.

ಮೃತ ಬಾಲಕರನ್ನು ತನ್ಮಯ್ (17) ಮತ್ತು ಕಿಶೋರ್ (12) ಎಂದು ಗುರುತಿಸಲಾಗಿದೆ. ಹಾಸನದಿಂದ ಕೂಲಿ ಕೆಲಸಕ್ಕೆ ಮೂಡಿಗೆರೆಗೆ ಬಂದಿದ್ದರು ಎಂದು ತಿಳಿದುಬಂದಿದೆ . ಮೂವರಲ್ಲಿ ಓರ್ವ ಬಾಲಕ ಬಚಾವ್ ಆಗಿದ್ದಾನೆ.

ಕೆರೆಯಲ್ಲಿ ಸಿಲುಕಿದ್ದ ಓರ್ವ ಬಾಲಕ ಹರಸಾಹನ ಪಟ್ಟು ಬಚಾವ್ ಮಾಡಲಾಗಿದೆ. ಇಬ್ಬರ ಮೃತದೇಹವನ್ನ ಸ್ಥಳಿಯರು ಹೊರತೆಗೆದಿದ್ದಾರೆ. ಸ್ಥಳೀಯ ಈಜು ತಜ್ಞರು ಹಾಗೂ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Leave A Reply

Your email address will not be published.

error: Content is protected !!