Crime News | ವಾಹನಗಳ ಗ್ಲಾಸ್ ಒಡೆದು ಜಖಂಗೊಳಿಸಿದ್ದ 6 ಮಂದಿ ದುಷ್ಕರ್ಮಿಗಳು ಅಂದರ್

Written by malnadtimes.com

Published on:

SHIVAMOGGA | ನಗರದ ಹೊಸಮನೆ 3ನೇ ಕ್ರಾಸ್‌ನಲ್ಲಿ ಮೇ 30 ರಂದು ರಾತ್ರಿ ಮನೆ ಮುಂದೆ ಸಾರ್ವಜನಿಕರು ನಿಲ್ಲಿಸಿದ್ದ ವಾಹನಗಳ (Vehicle’s) ಗ್ಲಾಸ್ ಗಳನ್ನು ಒಡೆದು ಜಖಂಗೊಳಿಸಿದ್ದ 6 ಮಂದಿ ದುಷ್ಕರ್ಮಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಈ ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ PREVENTION OF DESTRUCTION AND LOSS OF PROPERTY ACT ಮತ್ತು IPC ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದರು. ಜೂ.09 ರಂದು ಈ ಕೆಳಕಂಡ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Read More :Black Pepper Price | 6 ವರ್ಷಗಳ ಬಳಿಕ ಕಾಳುಮೆಣಸಿನ ದರದಲ್ಲಿ ಭಾರಿ ಏರಿಕೆ, ಬೆಳೆಗಾರರು ಹರ್ಷ

ನೀರಜ್ ಬಿ @ ಬಿಕ್ಲಾ (21) ಹೊಸಮನೆ ಸುಬ್ಬಯ್ಯ ಆಸ್ಪತ್ರೆ ಪಕ್ಕ ಶಿವಮೊಗ್ಗ ನಗರ
ಗಗನ್ ಇ @ ಕಪಾಲಿ ಬಿನ್ ಈಶ್ವರ (19) ಹೊಸಮನೆ ಶಿವಮೊಗ್ಗ ನಗರ
ದರ್ಶನ್ ಎಸ್ @ ದಾಸ (20) ಕಾಮಾಕ್ಷಿ ಬೀದಿ ಶಿವಮೊಗ್ಗ ನಗರ
ರಾಕೇಶ್ @ ಅಪ್ಪು (20) ಜಟ್ ಪಟ್ ನಗರ ವಿನೋಬನಗರ ಶಿವಮೊಗ್ಗ
ಶ್ರೀನಿವಾಸ @ ಅಪ್ರಿಲಾ ಸೀನಾ (24) ಮೇದಾರಕೇರಿ ವಿನೋಬಗರ ಶಿವಮೊಗ್ಗ 

ಈ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಇವರನ್ನು ವಿಚಾರಣೆ ಮಾಡಿದ್ದು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಎಎಸ್ಪಿ ಅನಿಲ್ ಕುಮಾರ್ ಭೂಮಾರಡ್ಡಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ ಇವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಎ ಉಪ ವಿಭಾಗದ ಡಿವೈಎಸ್ಪಿ ಬಾಬು ಆಂಜನಪ್ಪ, ಮತ್ತು ಬಿ ಉಪ ವಿಭಾಗದ ಡಿವೈಎಸ್ಪಿ ಸುರೇಶ್ ಮೇಲ್ವಿಚಾರಣೆಯಲ್ಲಿ, ದೊಡ್ಡಪೇಟೆ ಠಾಣೆ ಪಿಐ ರವಿ ಪಾಟೀಲ್ ರವರ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿತ್ತು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗಿಯಾದ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು  ಶಿವಮೊಗ್ಗ ಎಸ್ಪಿ ಪ್ರಶಂಸಿಸಿ ಅಭಿನಂದಿಸಿದ್ದಾರೆ.

Read More:Gruhalakshmi Scheme | ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಕ್ರೆಡಿಟ್

Leave a Comment