ಅಂಬೇಡ್ಕರ್ ವಿಚಾರಧಾರೆ, ಚಿಂತನೆ ಹಾಗೂ ಆದರ್ಶಗಳು ಯುವಜನಾಂಗ ಅಳವಡಿಸಿಕೊಳ್ಳಬೇಕು ; ಆರಗ ಜ್ಞಾನೇಂದ್ರ

Written by Mahesha Hindlemane

Published on:

ರಿಪ್ಪನ್‌ಪೇಟೆ : ಸಮಾಜಕ್ಕೆ ಮುಳ್ಳಿನಂತೆ ಅಂಟಿಕೊಂಡಿರುವ ಆಸ್ಪೃಶ್ಯತೆ ಜಾತೀಯತೆ ಹೋಗಲಾಡಿಸಲು ಜನತೆ ಮತ್ತು ಬಸವಾದಿ ಶರಣರು ಆಂಬೇಡ್ಕರ್ ಅವರ ವಿಚಾರಧಾರೆ ಚಿಂತನೆ ಹಾಗೂ ಆದರ್ಶಗಳು ನಮ್ಮ ಯುವಜನಾಂಗ ಮೊದಲು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬಿಲ್ಲೇಶ್ವರ ಅಂಬೇಡ್ಕರ್ ಭವನದಲ್ಲಿ ತೀರ್ಥಹಳ್ಳಿ ಚನ್ನಯ್ಯ ಸಮಾಜ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇಮಾಭಿವೃದ್ದಿ ಸಮಿತಿ ಸಾಗರ ಇವರ ಸಂಯುಕ್ತಾಶ್ರಯದಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ 135ನೇ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತ ದೇಶದ ಸಂವಿಧಾನ ಇಡೀ ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾದುದು. ಭಾರತ ದೇಶದಲ್ಲಿ ನಮ್ಮೆಲ್ಲರ ಪವಿತ್ರ ಗ್ರಂಥ ಭಾರತದ ಸಂವಿಧಾನ ನಾವಿಂದು ನಮ್ಮ ಹಕ್ಕುಗಳನ್ನು ಮಾತ್ರ ಕೇಳುತ್ತೇವೆಯೇ ಹೊರತು ಕರ್ತವ್ಯ ಪಾಲಿಸುವಲ್ಲಿ ಹಿಂದೆ ಉಳಿದಿದ್ದೇವೆಂದರು.

ಸಭೆ ಅಧ್ಯಕ್ಷತೆಯನ್ನು ಬಿ.ಎಂ.ಕೃಷ್ಣಮೂರ್ತಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಪ್ರೋ.ಚಿದಾನಂದ, ಮಂಜುನಾಥ ಮಮಡ್ರಿ, ಸವಿತಾ, ಜಯಹರೀಶ್, ಪಡುವಳ್ಳಿ ಗಿರೀಶ್, ಹರೀಶ್, ಮತ್ತಿತರರು ಉಪಸ್ಥಿತಿರಿದ್ದರು.


ಕಾವೇರಿ 2 ತಂತ್ರಾಂಶದಲ್ಲಿ ಕ್ರಯ ಪತ್ರ ನೋಂದಣಿ ಮಾಡಲು ಆಗ್ರಹ

ರಿಪ್ಪನ್‌ಪೇಟೆ : ಕಾವೇರಿ 2 ತಂತ್ರಾಂಶದ ಕ್ರಯಪತ್ರ ನೋಂದಣಿ ಮಾಡಲು ಶಿವಮೊಗ್ಗ ಉಪನೋಂದಣಾಧಿಕಾರಿಗಳಿಗೆ ಮನವಿ ಸಲ್ಲಿಸಿ 11 ದಿನಗಳಾದರೂ ಸಹ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಜಿಲ್ಲಾ ಪತ್ರ ಬರಹಗಾರ ಎಲ್. ವೆಂಕಟೇಶ ಆರೋಪಿಸಿ ರಾಜ್ಯ ಕಂದಾಯ ಸಚಿವ ಕೃಷ್ಣಬೈರೆಗೌಡರಿಗೆ ಮನವಿ ಮೂಲಕ ಆಗ್ರಹಿಸಿದ್ದಾರೆ.

ತಾವುಗಳು ಸಂಬಂಧಪಟ್ಟ ಶಿವಮೊಗ್ಗ ಉಪನೋಂದಣಾಧಿಕಾರಿಗಳ ಮೇಲೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಪಡಿಸುವಂತೆ ಸಚಿವರಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.

Leave a Comment