RIPPONPETE ; ಇಲ್ಲಿನ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್ಕುಮಾರ್ ಅಭಿಮಾನ ಬಳಗದ 4ನೇ ವರ್ಷದ ಸಮಿತಿಗೆ ನೂತನ ಅಧ್ಯಕ್ಷರಾಗಿ ಧನಲಕ್ಷ್ಮಿ ಪ್ರಧಾನ ಕಾರ್ಯದರ್ಶಿಗಳಾಗಿ ನಿರ್ಮಲ ಹರೀಶ್ ಮತ್ತು ಮಹಮ್ಮದ್ಹುಸೇನ್ ಆಯ್ಕೆಯಾಗಿದ್ದಾರೆ.
ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿ ಕುವೆಂಪು ಸಭಾಂಗಣದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ಸರ್ವ ಸದಸ್ಯರ ಸಭೆಯು ಕಳೆದ ಸಾಲಿನ ಅಧ್ಯಕ್ಷ ಉಲ್ಲಾಸ್ ತೆಂಕೋಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉಲ್ಲಾಸ್ ತೆಂಕೋಲ (ಗೌರವಾಧ್ಯಕ್ಷ), ಆರ್.ಡಿ.ಶೀಲಾ ಖಜಾಂಚಿಯಾಗಿ, ಕೆ.ದೇವರಾಜ್ ಗಣಪತಿ ಗವಟೂರು. ಜಿ.ಡಿ.ಮಲ್ಲಿಕಾರ್ಜುನ, ಸಾಜೀದಾ, ಹನೀಫ್, ಸೀಮಾ, ಭಾಸ್ಕರ್ಶೆಟ್ಟಿ, ಯೋಗೇಂದ್ರಪ್ಪಗೌಡ, ಶ್ವೇತಾ ನಿಶಾಂತ್, ಸ್ವಾತಿ, ಲೇಖನ, ನರಸಿಂಹ ಕೆರೆಹಳ್ಳಿ (ಉಪಾಧ್ಯಕ್ಷರು), ಪಿಯೂಸ್ ರೋಡ್ರಿಗಸ್, ಪ್ರಕಾಶ ಪಾಲೇಕರ್, ಈಶ್ವರಪ್ಪಗೌಡ, ಗುಂಡಣ್ಣ, ಅರವಿಂದ ಭಟ್ ಮಂಜುನಾಥ ಕಾಮತ್, ರಾಜೇಶ್ವರಿ, ಲಲಿತಾ ನಾರಾಯಣ್, (ಸಂಘಟನಾ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

