ಅಗಲಿದ ಗೆಳೆಯನ ಕುಟುಂಬಕ್ಕೆ ಆರ್ಥಿಕವಾಗಿ ನೆರವಾದ ಸ್ನೇಹಿತರು

Written by Mahesha Hindlemane

Published on:

ರಿಪ್ಪನ್‌ಪೇಟೆ : ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ ಸಹಪಾಠಿ ಶಶಿಧರ ದಂಡಿನ ಕುಟುಂಬಕ್ಕೆ ಗೆಳೆಯದ ಬಳಗದವರು ಆರ್ಥಿಕ ನೆರವು ನೀಡುವುದರೊಂದಿಗೆ ಸ್ನೇಹಕ್ಕೆ ಬೆಲೆ ಕಟ್ಟಲಾಗದಂತೆ ಮಾನವೀಯತೆ ಮೆರೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ 1984-85ನೇ ಸಾಲಿನ ಎಸ್.ಎಸ್.ಎಲ್.ಸಿ ಹಿರಿಯ ವಿದ್ಯಾರ್ಥಿಗಳ ಗೆಳೆಯರ ಬಳಗ ಎಂಬ ನಾಮಕರಣದೊಂದಿಗೆ ಆರಂಭಗೊಂಡಿರುವ ಬಳಗದ ಸ್ನೇಹಿತರು ಇತ್ತೀಚೆಗೆ ಅಕಾಲಿಕವಾಗಿ ಅನಾರೋಗ್ಯದ ಕಾರಣ ಸಾವನ್ನಪ್ಪಿದ ಶಶಿಧರ ದಂಡಿನ ಕುಟುಂಬಕ್ಕೆ ಬಳಗದ ರಘುನಾಥ (ರವಿಭಟ್ಟರು), ಹೆಚ್.ಎನ್.ಚೋಳರಾಜ್, ಕೆ.ಸುಶೀಲ ಮುಡಾಗ್ರೆ, ಓಂರಾಜ್ ಕೂರಂಬಳ್ಳಿ, ಆರ್.ಈ.ಭಾಸ್ಕರ್, ದೇವದಾಸ ಆಚಾರ್, ಇನ್ನಿತರ ಸ್ನೇಹ ಬಳಗದವರು ಆರ್ಥಿಕ ನೆರವು ನೀಡಿದ್ದಾರೆ.

Leave a Comment