67 ವರ್ಷದ ವೃದ್ಧೆ ಯನ್ನು ಕಂಬಕ್ಕೆ ಕಟ್ಟಿ ಹ*ಲ್ಲೆ-ಗೌತಮಪುರದಲ್ಲಿ ಆಘಾತಕಾರಿ ಘಟನೆ!

Written by Koushik G K

Updated on:

ಸಾಗರ : ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ 67 ವರ್ಷದ ವೃದ್ಧೆ ಹುಚ್ಚಮ್ಮ ಅವರ ಮೇಲೆ ಅಮಾನವೀಯ ಹ*ಲ್ಲೆಯೊಂದು ನಡೆದಿದೆ.ಮನೆಯ ಎದುರಿಗೆ ಕಸ ಹಾಕಿದ್ದನ್ನ ಪ್ರಶ್ನೆ ಮಾಡಿದ ಕಾರಣಕ್ಕೆ ನೆರೆಹೊರೆಯವರಾದ ಪ್ರೇಮ, ಮಂಜುನಾಥ್ ಮತ್ತು ದರ್ಶನ್ ಎಂಬವರು ವೃದ್ಧೆಗೆ ನಿಂ*ದನೆ ಮಾಡಿದ್ದು, ಬಳಿಕ ಅವರನ್ನು ಮನೆಯಿಂದ ಎಳೆದೊಯ್ದು ಕಂಬಕ್ಕೆ ಹಗ್ಗದಿಂದ ಕಟ್ಟಿ ಭೀಕರವಾಗಿ ಹ*ಲ್ಲೆ ನಡೆಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹುಚ್ಚಮ್ಮ ಅವರು ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರೇಮ, ಮಂಜುನಾಥ್ ಹಾಗೂ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ವೃದ್ಧೆಯ ಪುತ್ರ ಕನ್ನಪ್ಪ ಮಾತನಾಡುತ್ತಾ, “ನನ್ನ ತಾಯಿ ಮೇಲೆ ನಡೆದ ಈ ಹಲ್ಲೆ ಆಘಾತಕಾರಿ. ಪೊಲೀಸ್ ಇಲಾಖೆ ನನ್ನ ತಾಯಿ ಮತ್ತು ತಂದೆಗೆ ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ಈ ಅಮಾನವೀಯ ಕೃತ್ಯವು ಸಮಾಜವೇ ತಲೆತಗ್ಗಿಸುವಂತಹ ಘಟನೆ. ಜನಪ್ರತಿನಿಧಿಗಳು ಹಾಗೂ ಪೊಲೀಸ್‌ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Read More :EPFO ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್ :ಮುಂಗಡ ಹಣ ಹಿಂಪಡೆಯುವ ಮಿತಿ ಹೆಚ್ಚಳ !

Leave a Comment