ಹಸಿರುಮಕ್ಕಿ ಸೇತುವೆ: ಜನತೆಯ ಕನಸು ಈಗ ನನಸು ಆಗುತ್ತಿದೆ – ಸಚಿವ ಮಧು ಬಂಗಾರಪ್ಪ

Written by Koushik G K

Published on:

ಸಾಗರ: ಸಾಗರ ತಾಲ್ಲೂಕಿನ ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದ ಈ ಭಾಗದ ಜನರ ಬಹುಕಾಲದ ಕನಸು ಈಡೇರಿಸುತ್ತಿದೆ. ಈ ಯೋಜನೆಯ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮೇ 2026ರೊಳಗೆ ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಶುಕ್ರವಾರ ಅವರು ಸಾಗರ ತಾಲ್ಲೂಕಿನ ಹಸಿರುಮಕ್ಕಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯನ್ನು ವೀಕ್ಷಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದರು.

₹125.67 ಕೋಟಿ ಮೊತ್ತದ ಬೃಹತ್ ಯೋಜನೆ

▪️ ಹಸಿರುಮಕ್ಕಿ ಸೇತುವೆ ಕಾಮಗಾರಿಗೆ ₹125.67 ಕೋಟಿ ಅನುದಾನ
▪️ 1.115 ಕಿ.ಮೀ ರಸ್ತೆಯೊಂದಿಗೆ ಸೇತುವೆ ನಿರ್ಮಾಣ
▪️ ಹಸಿರುಮಕ್ಕಿ ಕಡೆ 345 ಮೀ. ಮತ್ತು ಕೊಲ್ಲೂರು ಕಡೆ 165 ಮೀ. ಕಾಮಗಾರಿ
▪️ 8.50 ಮೀ ಅಗಲದ ದ್ವಿಪಥ ಸೇತುವೆ
▪️ 34 ತಳಪಾಯಗಳ ನಿರ್ಮಾಣ
▪️ ಇನ್ನೂ ₹25 ಕೋಟಿ ಬಿಡುಗಡೆ ಬಾಕಿ ಎಂದು ಸಚಿವರು ತಿಳಿಸಿದ್ದಾರೆ.

ಕ್ಷಿಪ್ರಗತಿಯಲ್ಲಿ ಕಾಮಗಾರಿ: ಗುಣಮಟ್ಟದ ಮೇಲ್ವಿಚಾರಣೆ

“ನಮ್ಮ ಸರ್ಕಾರ ಬಂದ ನಂತರ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಹಣದ ಕೊರತೆ ಇಲ್ಲ. ಜನತೆಗೆ ಲಾಭವಾಗುವ ರೀತಿಯಲ್ಲಿ ಗುಣಮಟ್ಟದ ಕೆಲಸ ನಡೆಯುತ್ತಿದೆ,” ಎಂದು ಸಚಿವರು ಹೇಳಿದರು. ಸಾರ್ವಜನಿಕರ ಉಪಯೋಗಕ್ಕೆ ಸೇತುವೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದರು.

Read More : ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ ; ಹೊಸನಗರದ ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ. ಮಳೆ ದಾಖಲು

Leave a Comment