ಹಸಿರುಮಕ್ಕಿ ಸೇತುವೆ: ಜನತೆಯ ಕನಸು ಈಗ ನನಸು ಆಗುತ್ತಿದೆ – ಸಚಿವ ಮಧು ಬಂಗಾರಪ್ಪ

Written by Koushik G K

Published on:

ಸಾಗರ: ಸಾಗರ ತಾಲ್ಲೂಕಿನ ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದ ಈ ಭಾಗದ ಜನರ ಬಹುಕಾಲದ ಕನಸು ಈಡೇರಿಸುತ್ತಿದೆ. ಈ ಯೋಜನೆಯ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮೇ 2026ರೊಳಗೆ ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶುಕ್ರವಾರ ಅವರು ಸಾಗರ ತಾಲ್ಲೂಕಿನ ಹಸಿರುಮಕ್ಕಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯನ್ನು ವೀಕ್ಷಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದರು.

₹125.67 ಕೋಟಿ ಮೊತ್ತದ ಬೃಹತ್ ಯೋಜನೆ

▪️ ಹಸಿರುಮಕ್ಕಿ ಸೇತುವೆ ಕಾಮಗಾರಿಗೆ ₹125.67 ಕೋಟಿ ಅನುದಾನ
▪️ 1.115 ಕಿ.ಮೀ ರಸ್ತೆಯೊಂದಿಗೆ ಸೇತುವೆ ನಿರ್ಮಾಣ
▪️ ಹಸಿರುಮಕ್ಕಿ ಕಡೆ 345 ಮೀ. ಮತ್ತು ಕೊಲ್ಲೂರು ಕಡೆ 165 ಮೀ. ಕಾಮಗಾರಿ
▪️ 8.50 ಮೀ ಅಗಲದ ದ್ವಿಪಥ ಸೇತುವೆ
▪️ 34 ತಳಪಾಯಗಳ ನಿರ್ಮಾಣ
▪️ ಇನ್ನೂ ₹25 ಕೋಟಿ ಬಿಡುಗಡೆ ಬಾಕಿ ಎಂದು ಸಚಿವರು ತಿಳಿಸಿದ್ದಾರೆ.

ಕ್ಷಿಪ್ರಗತಿಯಲ್ಲಿ ಕಾಮಗಾರಿ: ಗುಣಮಟ್ಟದ ಮೇಲ್ವಿಚಾರಣೆ

“ನಮ್ಮ ಸರ್ಕಾರ ಬಂದ ನಂತರ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಹಣದ ಕೊರತೆ ಇಲ್ಲ. ಜನತೆಗೆ ಲಾಭವಾಗುವ ರೀತಿಯಲ್ಲಿ ಗುಣಮಟ್ಟದ ಕೆಲಸ ನಡೆಯುತ್ತಿದೆ,” ಎಂದು ಸಚಿವರು ಹೇಳಿದರು. ಸಾರ್ವಜನಿಕರ ಉಪಯೋಗಕ್ಕೆ ಸೇತುವೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದರು.

Read More : ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ ; ಹೊಸನಗರದ ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ. ಮಳೆ ದಾಖಲು

Leave a Comment