HOSANAGARA | ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ಮೇಲಿನಸಂಪಳ್ಳಿಯ ಗೊರಗದ್ದೆ ನಿವಾಸಿ ಪರಮೇಶ್ ಎಂಬುವವರು ಎಂದಿನಂತೆ ತೋಟದ ಕೆಲಸ ನಿರ್ವಹಿಸುತ್ತಿರುವಾಗ ರಭಸದ ಗಾಳಿ, ಮಳೆಗೆ ಮರದ ಕೊಂಬೆಯೊಂದು ದಿಢೀರನೆ ಬೆನ್ನ ಮೇಲೆ ಬಿದ್ದ ಪರಿಣಾಮ ಸ್ಟೈನಲ್ ಕಾರ್ಡ್ (ಬೆನ್ನುಮೂಳೆ) ಮುರಿದುರುತ್ತದೆ.
ಮನೆಯ ಸಂಪೂರ್ಣ ಜವಾಬ್ದಾರಿ ಇವರೇ ಹೊತ್ತಿತ್ತು ಇಳಿವಯಸ್ಸಿನ ಅಜ್ಜಿ, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳಿದ್ದಾರೆ.

ಗಾಯಗೊಂಡ ಪರಮೇಶನನ್ನು ಉಡುಪಿಯ ಮಣಿಪಾಲನಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು ಶಸ್ತ್ರಚಿಕಿತ್ಸೆಗೆ ಸುಮಾರು 16-20 ಲಕ್ಷ ರೂ. ವೆಚ್ಚವಾಗಲಿದೆ. ಇದನ್ನು ಭರಿಸಲು ಅವರಿಗೆ ಸಾಧ್ಯವಾಗದ ಕಾರಣ, ಇರುವ ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಬದುಕುತ್ತಿರುವ ಇವರಿಗೆ ತಾವುಗಳು ಧನ ಸಹಾಯ ಮಾಡಲು ಮನವಿ ಮಾಡಲಾಗಿದೆ.

ಧನ ಸಹಾಯ ಮಾಡಲು ಇವರ ಪತ್ನಿ ಕಮಲ ಎಂಬುವವರ UPI ID : 115169757004609@cnrb ಇದಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇವರ ಸಂಪರ್ಕ ಸಂಖ್ಯೆ 7259131448 ಕ್ಕೆ ಕರೆ ಮಾಡಬಹುದು.
Read more:-ರಾಜ್ಯಕ್ಕೆ ಇಂದು ಎಂಟ್ರಿಯಾಗಲಿದೆ ಮುಂಗಾರು, ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.