ಹೊಸನಗರ ; ಚೆಕ್ ಅಮಾನ್ಯ ಪ್ರಕರಣದಲ್ಲಿ ದಂಡ ವಿಧಿಸಿದ ಕೋರ್ಟ್ !

Written by Mahesh Hindlemane

Published on:

ಹೊಸನಗರ ; ಪಟ್ಟಣದ ನಿವಾಸಿ ಹೆಚ್.ಆರ್. ಸುರೇಶ್ ಇವರಿಂದ 5 ಲಕ್ಷ ರೂಪಾಯಿ ಕೈಗಡ ಸಾಲ ಪಡೆದು ಅವರಿಂದ ಪಡೆದ ಕೈಗಡ ಸಾಲದ ತೀರುವಳಿಗಾಗಿ ಹೊಸನಗರ ತಾಲ್ಲೂಕಿನ ಸೀಗೆಕೊಪ್ಪ ವಾಸಿ ನವೀನ್ ಎನ್.ಎಸ್ 5 ಲಕ್ಷ ರೂ. ಚೆಕ್‌ ನೀಡಿದ್ದು ಆರೋಪಿ ಖಾತೆಯಲ್ಲಿ ಸಾಕಷ್ಟು ಹಣವಿರಲಿಲ್ಲ. ಹೀಗಾಗಿ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ ಹೆಚ್.ಆರ್ ಸುರೇಶ್‌ ಹೊಸನಗರದ ನ್ಯಾಯಾಲಯದ ಮೊರೆ ಹೋಗಿದ್ದರು.

WhatsApp Group Join Now
Telegram Group Join Now
Instagram Group Join Now

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೊಸನಗರದ ಪ್ರಧಾನ ವ್ಯವಹಾರ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಾರುತಿಶಿಂಧೆ ಮೇ 28 ರಂದು ಆರೋಪಿಗೆ ದಂಡ ವಿಧಿಸಿದ್ದು ಆರೋಪಿಯು 5‌.10 ಲಕ್ಷ ರೂ. ಗಳನ್ನು ಪಾವತಿಸುವಂತೆ ಆದೇಶಿಸಲಾಗಿದೆ. 5.10 ಲಕ್ಷದ ರೂ. ಪೈಕಿ 5 ಲಕ್ಷ ರೂ.ಗಳನ್ನು ದೂರುದಾರ ಹೆಚ್.ಆರ್. ಸುರೇಶರಿಗೆ ಪಾವತಿಸುವಂತೆ ಮತ್ತು 10 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ನೀಡುವಂತೆ ಸೂಚಿಸಿ ತೀರ್ಪು ನೀಡಿದೆ‌.

ದಂಡ ಪಾವತಿಸಲು ಆರೋಪಿಯು ವಿಫಲರಾದಲ್ಲಿ ಆರು ತಿಂಗಳ ಕಾಲ ಸಾಮಾನ್ಯ ಸಜೆ ಅನುಭವಿಸುವಂತೆ ಆದೇಶಿಸಲಾಗಿದೆ. ದೂರುದಾರನ ಪರವಾಗಿ ಬಿ.ಎಸ್. ವಿನಾಯಕ್ ವಾದ ಮಂಡಿಸಿದರು.

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment