HOSANAGARA | ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯಾಗಿ ಉಮೇಶ್ ಎಸ್ ಗುಡ್ಡದರವರು ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

ಸುಮಾರು 8 ತಿಂಗಳ ಹಿಂದೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಚಂದ್ರಪ್ಪನವರು ಹೊಸನಗರ ಪಟ್ಟಣ ಪಂಚಾಯತಿಯಲ್ಲಿ ಸುಮಾರು ಮೂರೂವರೆ ವರ್ಷಗಳ ಕಾಲ ಪಟ್ಟಣ ಪಂಚಾಯತಿಯ ಜನರಿಗೆ ಉತ್ತಮ ಸೇವೆ ಸಲ್ಲಿಸಿ ಸೊರಬಕ್ಕೆ ವರ್ಗಾವಣೆಯಾದ ಮೇಲೆ ಖಾಯಂ ಮುಖ್ಯಾಧಿಕಾರಿಯಾಗಿ ಯಾರನ್ನು ನೇಮಿಸದೇ ಇದ್ದು ಪಟ್ಟಣ ಪಂಚಾಯತಿಯ ನೌಕರರಾದ ಉಮಾಶಂಕರ್, ಮಂಜುನಾಥ್ರವರು ಮುಖ್ಯಾಧಿಕಾರಿಗಳ ಕೆಲಸ ನಿರ್ವಹಿಸಿದ್ದು ನಂತರ ಶಿವಮೊಗ್ಗ ಭದ್ರಾವತಿಯಿಂದ ನಿಯೋಜನೆಗೊಂಡ ಮುಖ್ಯಾಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದರು ಇವರು ವಾರಕ್ಕೆ ಎರಡು ದಿನ ಮೂರು ದಿನ ಹೊಸನಗರ ಪಟ್ಟಣ ಪಂಚಾಯತಿಗೆ ಆಗಮಿಸುತ್ತಿದ್ದರು ಇದರಿಂದ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜನರಿಗೆ ಬಹಳ ತೊಂದರೆಯಾಗುತ್ತಿತ್ತು. ಆದರೆ ಈಗ ಖಾಯಂ ಮುಖ್ಯಾಧಿಕಾರಿ ಆಗಮಿಸಿರುವುರಿಂದ ಪಟ್ಟಣದ ಜನರು ನಿಟ್ಟುಸಿರು ಬಿಟ್ಟಿದ್ದು ಇನ್ನಾದರೂ ಜನರ ಕೆಲಸ ಸುಲಲಿತವಾಗಿ ಆಗುತ್ತದೆಯೇ ಕಾದು ನೋಡಬೇಕಾಗಿದೆ..
Read More
ಪಹಣಿಯಲ್ಲಿ ತಪ್ಪಾದ ಹೆಸರನ್ನು ಸರಿಪಡಿಸುವುದು ಹೇಗೆ ? ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ ?
ಗೃಹರಕ್ಷಕ ದಳದ 189 ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ !

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.