ಶಿವಮೊಗ್ಗ / ಚಿಕ್ಕಮಗಳೂರು : ಮಲೆನಾಡಿನಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಬುಧವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :
- ಹೊಸನಗರ – ಚಕ್ರಾನಗರ : 169
- ಹೊಸನಗರ – ಯಡೂರು : 146
- ಹೊಸನಗರ – ಮಾಸ್ತಿಕಟ್ಟೆ : 138
- ಹೊಸನಗರ – ಮಾಣಿ : 128
- ಹೊಸನಗರ – ಹುಲಿಕಲ್ : 122
- ಹೊಸನಗರ – ಸುಳಗೋಡು : 117.5
- ತೀರ್ಥಹಳ್ಳಿ – ಮೇಗರವಳ್ಳಿ : 117
- ಹೊಸನಗರ – ಮೇಲಿನಬೆಸಿಗೆ : 113.5
- ಸಾಗರ – ಹಿರೆನೆಲ್ಲೂರು : 99.5
- ತೀರ್ಥಹಳ್ಳಿ – ಹೊಸಹಳ್ಳಿ : 96
- ತೀರ್ಥಹಳ್ಳಿ – ತೀರ್ಥಮತ್ತೂರು : 95.5
- ಸಾಗರ – ಕಲ್ಮನೆ : 88.5
- ತೀರ್ಥಹಳ್ಳಿ – ಆರಗ : 76
- ಹೊಸನಗರ – ಹೊಸನಗರ : 77
- ತೀರ್ಥಹಳ್ಳಿ – ನೆರಟೂರು : 74
- ಹೊಸನಗರ – ಮುಂಬಾರು : 71.5
- ಹೊಸನಗರ – ಸಾವೇಹಕ್ಲು : 44
- ಸಾಗರ – ಭೀಮನಕೋಣೆ : 63
- ಸೊರಬ – ಹೊಸಬಾಳೆ : 59
- ತೀರ್ಥಹಳ್ಳಿ – ಸಾಲ್ಗಡಿ : 58.5
- ತೀರ್ಥಹಳ್ಳಿ – ಬೆಜ್ಜವಳ್ಳಿ : 47.5
- ಸೊರಬ – ನ್ಯಾರ್ಸಿ : 46.5
- ಸಾಗರ – ಕೋಳೂರು : 44.5
- ಸೊರಬ – ಬೆನ್ನೂರು : 44.5
- ಸಾಗರ – ಕಾರ್ಗಲ್ : 41
- ಸೊರಬ – ಇಂಡುವಳ್ಳಿ : 41
- ಹೊಸನಗರ – ಕೋಡೂರು : 38.5
- ತೀರ್ಥಹಳ್ಳಿ – ತ್ರಯಂಬಕಪುರ : 38
- ಸೊರಬ – ಶಿಗ್ಗಾ : 37
- ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 37
- ಸಾಗರ – ಕಂಡಿಕಾ : 32.5
- ಸೊರಬ – ದ್ಯಾವನಹಳ್ಳಿ : 32
- ಸೊರಬ – ಚಿತ್ತೂರು : 32
ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :
- ಶೃಂಗೇರಿ – ಬೇಗಾರು : 122.5
- ಮೂಡಿಗೆರೆ – ಕಿರುಗುಂದ : 111.5
- ಕೊಪ್ಪ – ಕಮ್ಮರಡಿ : 93.5
- ಕೊಪ್ಪ – ಕೊಪ್ಪ (ಗ್ರಾಮೀಣ) : 86
- ಮೂಡಿಗೆರೆ – ಹಂತೂರು : 86
- ಶೃಂಗೇರಿ – ಕುತಗೋಡು : 84
- ಶೃಂಗೇರಿ – ಧರೆಕೊಪ್ಪ : 77
- ಮೂಡಿಗೆರೆ – ಬೆಟ್ಟಗೆರೆ : 74.5
- ಕಳಸ – ಹೊರನಾಡು : 60
- ಶೃಂಗೇರಿ – ಮೆಣಸೆ : 59
- ಕೊಪ್ಪ – ಅಗಳಗಂಡಿ : 43
- ಕೊಪ್ಪ – ಹೇರೂರು 40
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ 1778.95 ಅಡಿ ತಲುಪಿದ್ದು ಜಲಾಶಯಕ್ಕೆ 46219 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1744.85 ಅಡಿ ದಾಖಲಾಗಿತ್ತು. ಜಲಾಶಯದಲ್ಲಿ ಕಳೆದ ಬಾರಿಗಿಂತ 34 ಅಡಿ ಹೆಚ್ಚಿನ ನೀರು ಸಂಗ್ರಹವಾಗಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.