Karnataka Mobile Canteen Subsidy Scheme :ಕರ್ನಾಟಕದ ಯುವಕರಿಗೆ ಹೊಸ ನಿರೀಕ್ಷೆ ಮೂಡಿಸಿರುವ ಯೋಜನೆ ಇದಾಗಿದೆ. ರಾಜ್ಯದ ಪ್ರವಾಸೋದ್ಯಮ ಇಲಾಖೆ “ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ” ಎಂಬ ಹೆಸರಿನಲ್ಲಿ ಹೊಸ ಯೋಜನೆಯನ್ನು ಘೋಷಿಸಿದೆ. ಇದರಡಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ನಿರುದ್ಯೋಗಿ ಯುವಕರು ತಮ್ಮದೇ ಆದ ಮೊಬೈಲ್ ಫುಡ್ ಕ್ಯಾಂಟೀನ್ ಆರಂಭಿಸಲು ಸರ್ಕಾರದಿಂದ ₹5 ಲಕ್ಷವರೆಗೆ ನೆರವು ಪಡೆಯಬಹುದು.
ಯೋಜನೆಯ ಉದ್ದೇಶಗಳು:
- ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಒದಗಿಸುವುದು
- ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಲಘು ಉದ್ಯಮಗಳ ಬೆಳವಣಿಗೆಗೆ ಉತ್ತೇಜನ
- ಎಸ್ಸಿ/ಎಸ್ಟಿ ಸಮುದಾಯದ ಆರ್ಥಿಕ ಸಬಲೀಕರಣ
ಸಹಾಯಧನದ ವಿವರ:
- ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಯೋಜನೆಯ ಒಟ್ಟು ವೆಚ್ಚದ 70% ರಷ್ಟು ಸಹಾಯಧನ ಲಭ್ಯವಿದೆ
- ಗರಿಷ್ಠ ₹5 ಲಕ್ಷವರೆಗೆ ಹಣಕಾಸು ನೆರವು ಒದಗಿಸಲಾಗುತ್ತದೆ
- ಇತರೆ ಅವಶ್ಯಕ ಸಾಮಾನುಗಳ ಖರೀದಿಗೂ ಸಹ ಅನುದಾನ ಬಳಸಬಹುದಾಗಿದೆ
ತರಬೇತಿ ಅವಕಾಶ:
- ಆಯ್ಕೆಯಾದ ಅಭ್ಯರ್ಥಿಗಳಿಗೆ KSTDC (ಕರ್ನಾಟಕ ಸ್ಟೇಟ್ ಟೂರಿಸ್ಟ್ ಡೆವಲಪ್ಮೆಂಟ್ ಕಾರ್ಪೊರೇಷನ್) ವತಿಯಿಂದ ಒಂದು ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ
- ತರಬೇತಿ ಅವಧಿಯಲ್ಲಿ ಬಸವಣಿಗೆ, ಊಟ ಹಾಗೂ ಭತ್ಯೆ ಸಹ ಸರ್ಕಾರದ ಭಾಗವಾಗಿರುತ್ತದೆ
ಅರ್ಹತಾ ಮಾನದಂಡಗಳು:
- ಕರ್ನಾಟಕದ ನಿವಾಸಿಯಾಗಿರಬೇಕು
- ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದವರಾಗಿರಬೇಕು
- ವಯಸ್ಸು 20ರಿಂದ 45 ವರ್ಷಗಳ ನಡುವೆ ಇರಬೇಕು
- ಕನಿಷ್ಠ SSLC (10ನೇ ತರಗತಿ) ಪಾಸ್ ಆಗಿರಬೇಕು
- ಕ್ಯಾಂಟೀನ್ ನಿರ್ವಹಣೆ ಹಾಗೂ ಉದ್ಯಮ ಮಾಡಲು ಆಸಕ್ತರಾಗಿರಬೇಕು
ಹೆಚ್ಚಿನ ಮಾಹಿತಿಗೆ:
ಈ ಯೋಜನೆಗೆ ಸಂಬಂಧಿಸಿದ ವಿವರಗಳು ಹಾಗೂ ಅರ್ಜಿ ಪ್ರಕ್ರಿಯೆ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಸ್ಥಳೀಯ ಪ್ರವಾಸೋದ್ಯಮ ಕಚೇರಿಯನ್ನು ಸಂಪರ್ಕಿಸಬಹುದು.
Read More
ಹುಲಿಕಲ್ ಘಾಟ್ನಲ್ಲಿ ಲಾರಿ ಕೆಟ್ಟು ನಿಂತು ಸಂಚಾರ ಅಸ್ತವ್ಯಸ್ತ: ನೂರಾರು ವಾಹನಗಳು ಸಿಲುಕಿ ಪರದಾಟ
ಹೊಸನಗರ ; ಭಾರಿ ಪ್ರಮಾಣದ ಭೂ ಕುಸಿತ, ಆತಂಕದಲ್ಲಿ ಗ್ರಾಮಸ್ಥರು
ಅವರು MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.