ಹೊಸನಗರ ; ಸದಸ್ಯರ ಗಮನಕ್ಕೆ ಬಾರದೇ ಹಲವು ಕಾರ್ಯಗಳು ಈ ಹಿಂದೆ ನಡೆದಿವೆ. ಇದನ್ನು ತಪಿಸುವ ಸಲುವಾಗಿ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರವಷ್ಟೇ ಕಾಮಗಾರಿಗಳನ್ನು ನಡೆಸಬೇಕು ಮತ್ತು ಯಾವುದೇ ಕಡತಗಳನ್ನು ಅಧ್ಯಕ್ಷರು ಪರಿಶೀಲಿಸದ ನಂತರವೇ ಕಡತ ಮುಂದುವರೆಯಬೇಕು ಎಂದು ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಹೇಳಿದರು.
ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಸಾರ್ವಜನಿಕರಿಂದ ಚುನಾಯಿತ ಪ್ರತಿನಿಧಿಗಳಾಗಿ ಪಂಚಾಯಿತಿ ಕಛೇರಿಯಲ್ಲಿ ನಡೆಯುವ ಕಾರ್ಯಗಳ ಮಾಹಿತಿ ಇಲ್ಲದಿದ್ದಲ್ಲಿ ಸಾರ್ವಜನಿಕ ವಲಯದಲ್ಲಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಈ ಕಾರಣಕ್ಕೆಎಲ್ಲಾ ವಿಚಾರಗಳನ್ನೂ ಇನ್ನು ಮುಂದಿನ ದಿನಗಳಲ್ಲಿ ಸಭೆಯ ಗಮನಕ್ಕೆ ತಂದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು. ತುರ್ತು ಸಂದರ್ಭಗಳಲ್ಲಿ ಇದನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿರುವ ಖಾಸಗಿ ಲೇಔಟ್ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿಲ್ಲ. ಇದರಿಂದ ಲೇಔಟ್ ಸಮೀಪದ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ನಿಯಮಾನುಸಾರ ಲೇಔಟ್ ನಿರ್ಮಾಣ ಮಾಡಿದವರು ರಸ್ತೆ, ಚರಂಡಿ ಅಭಿವೃದ್ಧಿಪಡಿಸಬೇಕು. ಆದರೆ ಜನರಿಗೆ ಇದರ ಅರಿವಿಲ್ಲದೇ ಪಂಚಾಯಿತಿಯನ್ನು ದೂರುತ್ತಾರೆ. ಇಂತಹ ಲೋಪಗಳು ಆಗದಂತೆ ಬಿಗಿ ನಿಲುವು ತಳೆಯುವ ಅಗತ್ಯವಿದೆ ಎಂದರು.

ಮಾತಿನ ಚಕಮಕಿ ;
ಸಭೆ ಆರಂಭದಲ್ಲಿಯೇ ತೀವ್ರ ಮಾತಿನ ಚಕಮಕಿ ನಡೆಯಿತು. ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಠಾಚಾರ ತಡೆಯುವುದಾಗಿ ಹಿಂದೆ ಅಧ್ಯಕ್ಷರು ಹೇಳಿದ್ದರು. ಆದರೆ ಯಾವ ಭ್ರಷ್ಟಾಚಾರ ನಡೆದಿದೆ, ಯಾರಿಂದ ನಡೆದಿದೆ ಎಂದು ಬಹಿರಂಗಗೊಳಿಸಬೇಕು ಎಂದು ಸದಸ್ಯ ಕಾಲಸಸಿ ಸತೀಶ್, ಚಿಕ್ಕನಕೊಪ್ಪ ಶ್ರೀಧರ ಹಾಗೂ ಓಂಕೇಶ್ ಗೌಡ ಸಭೆಯಲ್ಲಿ ಆಗ್ರಹಿಸಿ ಸಾಮಾನ್ಯ ಸಭೆ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದ್ದು ಈ ವಿಚಾರವಾಗಿ ಹೆಚ್ಚಿನ ಸದಸ್ಯರು ಏರುಧ್ವನಿಯಲ್ಲಿ ಮಾತಿಗಾರಂಭಿಸಿ ಇಡೀ ಸಭೆ ಗೊಂದಲದ ಗೂಡಾಯಿತು. ಒಂದು ಹಂತದಲ್ಲಿ ಅಭಿವೃದಿ ಅಧಿಕಾರಿ ರವಿಕುಮಾರ್ ಮಧ್ಯ ಪ್ರವೇಶಿಸಿ, ಸಭೆ ಅಜೆಂಡಾ ಪ್ರಕಾರ ನಡೆಯದಿದ್ದಲ್ಲಿ, ಸಭೆಯನ್ನು ರದ್ದುಪಡಿಸಬೇಕಾಗುತ್ತದೆ ಗ್ರಾಮದ ಸಾರ್ವಜನಿಕರ ಕಡತಗಳನ್ನು ತುಂಬಾ ಬಾಕಿ ಇದ್ದು ಸಾರ್ವಜನಿಕರಿಗೆ ನೀವೇ ಉತ್ತರ ನೀಡಿ ಎಂದು ಸಭಗೆ ತಿಳಿಸಿದ ನಂತರ ಸಭೆ ಮುಂದುವರೆಯಿತು.
ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ಸುಧಾ ನಂದಾಕುಮಾರಿ ಸದಸ್ಯರಾದ ಕಾಲಸಸಿ ಸತೀಶ, ಮಹೇಂದ್ರ, ದಿವ್ಯಾ ಪ್ರವೀಣ್, ಓಂಕೇಶ್, ಚಿಕ್ಕನಕೊಪ್ಪ ಶ್ರೀಧರ, ಬೇಬಿ, ಸವಿತಾ ರಮೇಶ್, ರಾಘವೇಂದ್ರ, ಶಶಿಕಲಾ, ನಿರ್ಮಾಲ, ಅಭಿವೃದ್ಧಿ ಅಧಿಕಾರಿ ರವಿ ಎಸ್, ಧರ್ಮಪ್ಪ, ರೇಖಾ, ದಿವಾಕರ, ಮೋಹನ್ ರಾಜ್, ಗೀತಾ, ಶಶಿಕಲಾ ಇನ್ನೂ ಮತ್ತಿತರರು ಇದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.