ಇಂದಿನಿಂದ ‘ನವರಾತ್ರ ನಮಸ್ಯಾ’ ಸಮಾಜ ಸಂಭ್ರಮ ಕಾರ್ಯಕ್ರಮ

Written by Koushik G K

Published on:

ಸಾಗರ:ಸಾಗರದ ರಾಘವೇಶ್ವರ ಸಭಾಭವನದಲ್ಲಿ ನಡೆಯಲಿರುವ ‘ನವರಾತ್ರ ನಮಸ್ಯಾ ಸಮಾಜ ಸಂಭ್ರಮ’ ಕಾರ್ಯಕ್ರಮಕ್ಕೆ ಭಾನುವಾರ ಭವ್ಯ ಚಾಲನೆ ದೊರಕಿತು. ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುರಪ್ರವೇಶವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

WhatsApp Group Join Now
Telegram Group Join Now
Instagram Group Join Now

ಪುರಪ್ರವೇಶದ ವೈಭವ

📢 Stay Updated! Join our WhatsApp Channel Now →

ನಗರದ ಶಾರದಾಂಬಾ ವೃತ್ತದಿಂದ ಆರಂಭವಾದ ಮೆರವಣಿಗೆ ಗಣಪತಿ ದೇವಾಲಯದವರೆಗೆ ಸಾಗಿತು. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು, 1.5 ಕಿಲೋಮೀಟರ್ ಉದ್ದದ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಸಾಗರವನ್ನು ಹರಿಸಿದರು. 2 ಸಾವಿರ ಮಾತೆಯರು ಪೂರ್ಣಕುಂಭದೊಂದಿಗೆ ಶ್ರೀಗಳನ್ನು ಸ್ವಾಗತಿಸಿದರು.

ಚಂಡೆವಾದನ, ನಾದಸ್ವರ, ಭಜನಾ ಕುಣಿತ, ರಾಮ ಸಂಕೀರ್ತನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯ ಕಣ್ಮನ ಸೆಳೆಯುವಂತೆ ಮಾಡಿತು. 15 ಅಡಿ ಎತ್ತರದ ಧನುರ್ಧಾರಿ ಶ್ರೀರಾಮನ ಮೂರ್ತಿ ಶೋಭಾಯಾತ್ರೆಯ ಆಕರ್ಷಣೆಯಾಗಿತ್ತು.

ಭಕ್ತಿಯ ಸಂದೇಶ

ಆರಂಭದಲ್ಲಿ ಶ್ರೀ ಶಾರದಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ರಥಾರೋಹಣ ಗೈದ ಶ್ರೀಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಹರತಾಳು ಹಾಲಪ್ಪ, ಹಾಗೂ ಶಿಮೂಲ್ ಅಧ್ಯಕ್ಷ ವಿದ್ಯಾಧರ ಫಲ ಸಮರ್ಪಿಸಿದರು. ವಿವಿಧ ಸಮಾಜದ ಮುಖಂಡರು ಹಾಗೂ ಗಣ್ಯರು ಕೂಡ ಭಾಗವಹಿಸಿದ್ದರು.

ಶೋಭಾಯಾತ್ರೆಯ ಬಳಿಕ ಮಾತನಾಡಿದ ಶ್ರೀಗಳು,

“ಸಾಗರಕ್ಕೆ ‘ಸಾಗರ’ ಎಂಬ ಹೆಸರು ಸಲ್ಲುವುದು ಹೇಗೆ ಎನ್ನುವುದರ ಉತ್ತರ ಇಂದು ದೊರಕಿದೆ. ಈ ಪುರಪ್ರವೇಶ ಉತ್ಸವಕ್ಕೆ ಬೇರೆ ಹೋಲಿಕೆ ಇಲ್ಲ. ಸಾಗರದಲ್ಲಿ ಭಕ್ತಿ ಸಾಗರವೇ ಹರಿಯಿತು. ಇವೆಲ್ಲ ವೈಭವಗಳು ರಾಜರಾಜೇಶ್ವರಿಗೆ ಸಲ್ಲುತ್ತವೆ,” ಎಂದು ಭಕ್ತರಿಗೆ ಸಂದೇಶ ನೀಡಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ,

“ಇದು ಐತಿಹಾಸಿಕ ಕಾರ್ಯಕ್ರಮ. ಸಾಗರದಲ್ಲಿ ದೇವಿಯ ಆರಾಧನೆ ನಡೆಯುತ್ತಿರುವುದು ನಮ್ಮೆಲ್ಲರ ಅದೃಷ್ಟ. ಶಾಸಕನಾಗಿ ಹಾಗೂ ಮಠದ ಭಕ್ತನಾಗಿ ಅಗತ್ಯವಾದ ಎಲ್ಲಾ ಸಹಕಾರವನ್ನು ನೀಡುತ್ತೇನೆ,” ಎಂದು ಭರವಸೆ ನೀಡಿದರು.

ನವರಾತ್ರ ನಮಸ್ಯಾ ವಿಶೇಷ ಕಾರ್ಯಕ್ರಮಗಳು

ನವರಾತ್ರ ನಮಸ್ಯಾ ಅಂಗವಾಗಿ ಸೋಮವಾರದಿಂದ ಪ್ರತಿದಿನ ಶ್ರೀಗಳಿಂದ ಲಲಿತೋಪಾಖ್ಯಾನ ವಿಶೇಷ ಪ್ರವಚನ ನಡೆಯಲಿದೆ. ಜೊತೆಗೆ:

  • ಬೆಳಗಿನ ಶ್ರೀಪೂಜೆ
  • ಲಲಿತಾಮೂರ್ತಿ ಪೂಜೆ
  • ಚಂಡಿಕಾ ಹವನ
  • ಚಂಡೀ ಸಪ್ತಶತಿ ಪಾರಾಯಣ
  • ಕುಂಕುಮಾರ್ಚನೆ
  • ಭಜನೆ, ಸುವಾಸಿನಿ ಪೂಜೆ

ಇತ್ಯಾದಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Leave a Comment