ಹೊಸನಗರ

ಎಸ್‌ಸಿಐ ರಿಪ್ಪನಪೇಟೆ ಲಿಜನ್ ಅಧ್ಯಕ್ಷರಾಗಿ ಪಿಯೂಸ್ ರೋಡ್ರಿಗಸ್ ಪ್ರಮಾಣವಚನ ಸ್ವೀಕಾರ

ಎಸ್‌ಸಿಐ ರಿಪ್ಪನಪೇಟೆ ಲಿಜನ್ ಅಧ್ಯಕ್ಷರಾಗಿ ಪಿಯೂಸ್ ರೋಡ್ರಿಗಸ್ ಪ್ರಮಾಣವಚನ ಸ್ವೀಕಾರ – piyush

ರಿಪ್ಪನಪೇಟೆ: ಎಸ್‌ಸಿಐ ರಿಪ್ಪನಪೇಟೆ ಲಿಜನ್‌ನ ನೂತನ ಅಧ್ಯಕ್ಷರಾಗಿ ಪಿಯೂಸ್ ರೋಡ್ರಿಗಸ್ ಅಧಿಕಾರ ಸ್ವೀಕರಿಸಿದರು. ಎಸ್‌ಸಿಐ ಉಪಾಧ್ಯಕ್ಷ ಕೆ.ವಿ. ಕುಮಾರ್ ಕೂರ್ಸೆ ಅವರು ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು.

WhatsApp Group Join Now
Telegram Group Join Now
Instagram Group Join Now

ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ವಿ. ಕುಮಾರ್ ಕೂರ್ಸೆ, ನಾಯಕತ್ವ ಎನ್ನುವುದು ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾದುದಲ್ಲ; ಅದು ಸಾಮೂಹಿಕವಾಗಿ ನಡೆಯುವ ಕ್ರಿಯೆ ಎಂಬುದನ್ನು ಸೀನಿಯರ್ ಚೇಂಬರ್ ಬಲವಾಗಿ ನಂಬುತ್ತದೆ ಎಂದರು.

ಪ್ರತಿಯೊಬ್ಬ ಸದಸ್ಯರಲ್ಲೂ ನಾಯಕತ್ವದ ಗುಣ ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ವ್ಯಕ್ತಿಯು ತಾನು ಕಾರ್ಯನಿರ್ವಹಿಸುವ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಲು ನಾಯಕತ್ವದ ಸಾಮರ್ಥ್ಯ ಅತ್ಯಂತ ಅಗತ್ಯ. ಈ ಕಾರಣದಿಂದ ನಾಯಕತ್ವ ವಿಕಾಸಕ್ಕೆ ಎಸ್‌ಸಿಐ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ಬಡತನದಿಂದ ಜನರನ್ನು ಹೊರತರುವುದು ಅಗತ್ಯ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಸ್‌ಸಿಐ ರಾಷ್ಟ್ರೀಯ ಅಧ್ಯಕ್ಷ ಎಂ. ವಾಸುದೇವನ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವಯುತ ಬದುಕು ಸಿಗಬೇಕು ಎಂಬುದೇ ಎಸ್‌ಸಿಐಯ ನಿಜವಾದ ಆಶಯ ಎಂದರು.

ಹಲವು ಕಾರಣಗಳಿಂದ ಕೋಟ್ಯಂತರ ಜನರು ಇನ್ನೂ ಬಡತನದಲ್ಲಿ ಬದುಕುತ್ತಿದ್ದಾರೆ. ಅವರಿಗೆ ಗೌರವಯುತ ಜೀವನ ಕಲ್ಪಿಸಬೇಕಾದರೆ ಮೊದಲು ಬಡತನದ ಸಂಕಷ್ಟದಿಂದ ಹೊರತರಬೇಕು ಎಂದು ಹೇಳಿದರು.

ರಕ್ತದಾನಕ್ಕೆ ಹೆಚ್ಚಿನ ಮಹತ್ವ

ಎಸ್‌ಸಿಐ ಪೂರ್ವ ಅಧ್ಯಕ್ಷ ಚಿತ್ರಕುಮಾರ್ ಮಾತನಾಡಿ, ಸದಸ್ಯರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬಹುದು ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ರಕ್ತದಾನವು ಮಾನವೀಯತೆಯ ಮತ್ತೊಂದು ರೂಪವಾಗಿದೆ. ಎಸ್‌ಸಿಐ ಸಂಸ್ಥೆ ರಕ್ತದಾನ ಕಾರ್ಯಕ್ರಮಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ಮಾನವ ಸಂಪನ್ಮೂಲ ಅಭಿವೃದ್ಧಿಗೆ ತರಬೇತಿ ಅಗತ್ಯ

ರಾಷ್ಟ್ರೀಯ ಪೂರ್ವ ಸಂಯೋಜಕ ಎಚ್.ಎನ್. ಸೂರ್ಯನಾರಾಯಣ ಮಾತನಾಡಿ, ದೇಶದಲ್ಲಿ ಅಪಾರವಾದ ಮಾನವ ಸಂಪನ್ಮೂಲವಿದ್ದು, ಅದನ್ನು ವ್ಯಕ್ತಿ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.

ಮಾನವ ಸಂಪನ್ಮೂಲದ ಸಾಮರ್ಥ್ಯವನ್ನು ಹೆಚ್ಚಿಸಲು ತರಬೇತಿ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶುಭ ಎ. ರಾವ್, ಬೇನಾಜ್ ಎಚ್.ಎಂ., ದಿವ್ಯಶ್ರೀ ಮತ್ತು ಅಂಕಿತ್ ಅವರನ್ನು ಸನ್ಮಾನಿಸಲಾಯಿತು. ಸಾಧಕರ ವಿಭಾಗದಲ್ಲಿ ಶಿಕ್ಷಕ ಭೋಜಪ್ಪ ಅವರನ್ನು ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್‌ಸಿಐ ರಿಪ್ಪನಪೇಟೆ ಲಿಜನ್‌ನ ನೂತನ ಅಧ್ಯಕ್ಷ ಪಿಯೂಸ್ ರೋಡ್ರಿಗಸ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್‌ಸಿಐ ಜಿಎಲ್‌ಸಿ ಸಂಪತ್ ಕುಮಾರ್, ಉಪಾಧ್ಯಕ್ಷ ನಾರಾಯಣ ನಾಯರ್, ತರಬೇತಿ ಮತ್ತು ಯುವ ವಿಭಾಗದ ನಿರ್ದೇಶಕ ಹುಸೇನ್ ಹೈಕಾಡಿ, ರಿಪ್ಪನಪೇಟೆ ಲಿಜನ್ ಕಾರ್ಯದರ್ಶಿ ಸಂಗೀತಾ ಷಾಜಿ, ಖಜಾಂಚಿ ಸಾಜಿದ್ ಹನೀಫ್, ಉಪಾಧ್ಯಕ್ಷರಾದ ನೇಮಪ್ಪ ಬಂಡಿ ಮತ್ತು ಅಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕುಮಾರಿ ಕುಮುದ ಪ್ರಾರ್ಥಿಸಿದರು. ಶೆಲ್ವಿ ಪಿಯೂಸ್ ಸೀನಿಯರ್ ಕ್ರೀಡ್ ವಾಚಿಸಿದರು. ರಾಮಚಂದ್ರ ಸ್ವಾಗತಿಸಿದರು. ಹಬೀಬ್ ಸಾಹಿಬ್ ವರದಿ ಮಂಡಿಸಿದರು.

ಸರಿತಾ ಅನಿಲ್, ದೇವರಾಜ್ ಮಳವಳ್ಳಿ, ಷಾಜಿ, ಗುಂಡ ನಾಯ್ಕ್ ಮತ್ತು ಪ್ರಭಾಕರ್ ಅತಿಥಿಗಳನ್ನು ಪರಿಚಯಿಸಿದರು. ನೈನಿತಾ, ಧನ್ಯ ಮತ್ತು ಸಂಜೀವ್ ಸನ್ಮಾನಿತರ ಪರಿಚಯ ನಡೆಸಿಕೊಟ್ಟರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650