ಬಿಲ್ಲೇಶ್ವರ ಮುಜರಾಯಿ ದೇವಸ್ಥಾನಕ್ಕೆ ಅರ್ಚರ ನೇಮಕಾತಿಗೆ ಅರ್ಜಿ ಆಹ್ವಾನ | ಸ್ಥಿರಾಸ್ತಿಗಳ ಅಂದಾಜು ಮಾರ್ಗಸೂಚಿ ; ಆಕ್ಷೇಪಣೆಗೆ ಆಹ್ವಾನ

0 45

ಹೊಸನಗರ : ತಾಲ್ಲೂಕಿನ ಹುಂಚ ಹೋಬಳಿ ಬಿಲ್ಲೇಶ್ವರದಲ್ಲಿರುವ ಮುಜರಾಯಿ ಸಿ ಗ್ರೇಡ್ ದೇವಸ್ಥಾನಕ್ಕೆ ಅರ್ಚಕರ ನೇಮಕಾತಿಗೆ ತಾಲ್ಲೂಕು ಕಂದಾಯ ಇಲಾಖೆಯ ಮುಜರಾಯಿ ಇಲಾಖೆ ಅರ್ಜಿ ಆಹ್ವಾನಿಸಿದ್ದು ಆಸಕ್ತರು ಅಗಸ್ಟ್ 28ರ ಒಳಗೆ ತಮ್ಮ ಮೂಲ ದಾಖಲಾತಿಯೊಂದಿಗೆ ಹೊಸನಗರ ಕಂದಾಯ ಇಲಾಖೆಯ ಪ್ರಭಾರ ತಹಶೀಲ್ದಾರ್ ರಾಕೇಶ್ ಹಾಗೂ ಮುಜರಾಯಿ ಇಲಾಖೆಯ ಗುಮಾಸ್ಥೆ ಶಿಲ್ಪಾರವರಿಗೆ ತಲುಪಿಸಬಹುದಾಗಿದ್ದು ಹೆಚ್ಚಿನ ಮಾಹಿತಿಯನ್ನು ಇಲಾಖೆಯಲ್ಲಿ ತಿಳಿದುಕೊಳ್ಳಬಹುದಾಗಿದೆ ಎಂದಿದ್ದಾರೆ.

ಸ್ಥಿರಾಸ್ತಿಗಳ ಅಂದಾಜು ಮಾರ್ಗಸೂಚಿ; ಆಕ್ಷೇಪಣೆಗೆ ಆಹ್ವಾನ


ಹೊಸನಗರ: ತಾಲ್ಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳ ಸ್ಥಿರಾಸ್ತಿಗಳ ಅಂದಾಜು ಮಾರ್ಗಸೂಚಿ ಮಾರುಕಟ್ಟೆ ಮೌಲ್ಯಗಳನ್ನು 2023-24 ನೇ ಸಾಲಿಗೆ ಪರಿಷ್ಕರಿಸಿ ಹಿರಿಯ ಉಪನೊಂದಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿದ್ದು ಸಾರ್ವಜನಿಕರ ಅಹವಾಲು ಆಕ್ಷೇಪಣೆ ಸಲಹೆ ಹಾಗೂ ಸೂಚನೆಗಳು ಇದ್ದಲ್ಲಿ ಆಗಸ್ಟ್ 30ರ ಒಳಗೆ ಕಾಲಾವಕಾಶ ನೀಡಲಾಗಿದ್ದು ಸೂಚನೆಗಳು ಇದ್ದಲ್ಲಿ ಅಗಸ್ಟ್ 30ರ ಒಳಗೆ ಹಿರಿಯ ಉಪನೋಂಣಾಧಿಕಾರಿಗಳ ಕಛೇರಿಗೆ ತಲುಪಿಸಬೇಕೆಂದು ಹಿರಿಯ ಉಪ ನೋಂದಣಾಧಿಕಾರಿ ರವಿ ಟಿ.ಎಸ್ ರವರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!