ಚಾಲಕನ ನಿಯಂತ್ರಣ ತಪ್ಪಿ ನದಿಗೆ ಪಲ್ಟಿಯಾದ ಕಂಟೈನರ್ ಲಾರಿ !

0 83

ಹೊಸನಗರ : ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿಯೊದು ನದಿಗೆ ಪಲ್ಟಿ ಹೊಡೆದ ಘಟನೆ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ನಡೆದಿದೆ.

ಕುಂದಾಪುರ ಕಡೆಯಿಂದ ಮಾಸ್ತಿಕಟ್ಟೆಗೆ ಬರುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹುಲಿಕಲ್ ಗ್ರಾಮದ ನದಿಗೆ ಬಿದ್ದಿದೆ, ಅದೃಷ್ಟವಶಾತ್ ಈ ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹುಲಿಕಲ್ ಗ್ರಾಮದಲ್ಲಿ ಚಕ್ರಾ, ಸಾವೇಹಕ್ಲು ಜಲಾನಯನದ ಹಿನ್ನೀರು ನಿಲ್ಲುತ್ತದೆ. ಇಂದು ಬೆಳಗ್ಗೆ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಬಿದ್ದ ಪರಿಣಾಮ ಕಂಟೈನರ್ ಲಾರಿ ಮುಳುಗಿದ್ದು ಚಾಲಕ ಪಾರಾಗಿದ್ದಾನೆ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!