ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಡಿ. ದೇವರಾಜ ಅರಸ್ ಪ್ರಶಸ್ತಿ ಘೋಷಣೆ ; ಅಭಿನಂದನೆ
ಹೊಸನಗರ : ರಾಜ್ಯ ಕಂಡ ಹಿರಿಯ ರಾಜಕೀಯ ಮುತ್ಸದಿ, ಮಾಜಿ ಸ್ಪೀಕರ್, ಮಾಜಿ ಸಚಿವ, ಗೇಣಿದಾರರ ಹರಿಕಾರ, ರೈತಪರ ನಾಯಕ, ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಸಕ್ತ ರಾಜ್ಯ ಸರ್ಕಾರವು 2023/24ನೇ ಸಾಲಿನ ದಿವಂಗತ ಡಿ. ದೇವರಾಜ್ ಅರಸ್ ಪ್ರಶಸ್ತಿ ಘೋಷಣೆ ಮಾಡಿದೆ.
ಅಭಿನಂದನೆ :
ಪ್ರಶಸ್ತಿಗೆ ಭಾಜನರಾದ ಕಾಗೋಡು ತಿಮ್ಮಪ್ಪ ಅವರನ್ನು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಜಿ. ಚಂದ್ರಮೌಳಿ, ಬಗರ್ ಹುಕುಂ ಸಮಿತಿ ಮಾಜಿ ಅಧ್ಯಕ್ಷ ಎರಗಿ ಉಮೇಶ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಡಿ.ಎಂ.ಸದಾಶಿವ ಶ್ರೇಷ್ಠಿ, ಪ.ಪಂ.ಸದಸ್ಯ ಅಶ್ವಿನಿ ಕುಮಾರ್, ಪ್ರಮುಖರಾದ ನಿವೃತ್ತ ಎಎಸ್ಐ ಎಂ.ಪಿ.ಲೋಕೇಶ್, ಕಳೂರು ಗೋಪಾಲಕೃಷ್ಣ ಪೂಜಾರಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.