5.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ ; ಆರೋಪಿಗಳ ಬಂಧನ

0 68


ರಿಪ್ಪನ್‌ಪೇಟೆ: ಕಳೆದ 15 ದಿನದ ಹಿಂದೆ ಅಮೃತ ಪಂಚಾಯ್ತಿ ವ್ಯಾಪ್ತಿಯ ಗಂದ್ರಳ್ಳಿ ಗೋವಿಂದನಾಯ್ಕ್ ಎಂಬುವರ ಮನೆಯ ಹೆಂಚು ಕಿತ್ತು ಮನೆಯಲ್ಲಿದ್ದ ಸುಮಾರು 5.30 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧಿಸುವ ಮೂಲಕ ಕಳುವಾದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವುದಾಗಿ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಹೊಸನಗರ ವೃತ್ತ ನಿರೀಕ್ಷಕರು ಗಿರೀಶ್ ತಿಳಿಸಿದರು.


ಆರೋಪಿಗಳಿಂದ ವಶಪಡಿಸಿಕೊಂಡ ಕಳುವಾದ 109 ಗ್ರಾಂ ಚಿನ್ನದ ಸರ ಮತ್ತು 73 ಗ್ರಾಂ ಬೆಳ್ಳಿಯನ್ನು ವಸ್ತುಗಳನ್ನು ಇಂದು ಠಾಣೆಯಲ್ಲಿ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ ಹೊಸನಗರ ವೃತ್ತ ನಿರೀಕ್ಷಕರು ಗಿರೀಶ್ ಹಾಗೂ ಪಿಎಸ್‌ಐ ಎಸ್.ಪಿ.ಪ್ರವೀಣ್ ಪ್ರದರ್ಶಿಸಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


ಕಳ್ಳತನದ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯನ್ನಾದರಿಸಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ  ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಹೊಸನಗರ ವೃತ್ತ ನಿರೀಕ್ಷಕರು ಗಿರೀಶ್ ಹಾಗೂ ಪಿಎಸ್‌ಐ ಎಸ್.ಪಿ.ಪ್ರವೀಣ್ ಪೊಲೀಸ್ ಸಿಬ್ಬಂದಿಗಳಾದ ಉಮೇಶ, ಕ್ರೈಂ ಪೊಲೀಸ್ ಶಿವಕುಮಾರ, ಚಾಲಕ ಮಧು ಪರಮೇಶ್ವರ, ಸಂತೋಷ ಕೊರವಾರ್ ರವರ ಇವರು ರಿಪ್ಪನ್‌ಪೇಟೆ ಸಮೀಪದ ಸಿದ್ದಪ್ಪನ ಗುಡಿಯ ಬಳಿ ಆರೋಪಿಗಳನ್ನು ಬೆನ್ನಟ್ಟಿಕೊಂಡು ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸನಗರ ತಾಲೂಕಿನ ಬಿಳಕಿ ಗ್ರಾಮದ ಸುದರ್ಶನ, ಆದರ್ಶ, ಮಧುಸೂದನ್ ಬಂಧಿತ ಆರೋಪಿಗಳಾಗಿದ್ದಾರೆ.

ಪತ್ತೆಗೆ ಸಹಕಾರಿಯಾಗಿತ್ತು ಆ ಒಂದು ಸುಳಿವು !

ಜೂನ್ 08 ರಂದು ಗರ್ತಿಕೆರೆ ವ್ಯಾಪ್ತಿಯ ಗಂದ್ರಳ್ಳಿ ಗ್ರಾಮದಲ್ಲಿ ಕಳ್ಳತನ ನಡೆದ ಬಗ್ಗೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾದ ಕ್ಷಣದಿಂದಲೇ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕಾರ್ಯಪ್ರವೃತ್ತರಾಗಿದ್ದರು.

ಕಳ್ಳತನ ನಡೆದ ಸ್ಥಳದಲ್ಲಿ ವೃತ್ತಿಗತ ಅಪರಾಧಿಗಳಿಂದ ಕೃತ್ಯ ನಡೆದಿದ್ದ ಬಗ್ಗೆ ಯಾವುದೇ ಸುಳಿವು ದೊರೆಯದೇ ಇದ್ದ ಹಿನ್ನಲೆಯಲ್ಲಿ ಪ್ರಕರಣ ಪೊಲೀಸರಿಗೆ ಅತ್ಯಂತ ಜಟಿಲ ತಲೆನೋವಾಗಿ ಪರಿಣಮಿಸಿತ್ತು.

ನೂತನವಾಗಿ ಚಾರ್ಜ್ ವಹಿಸಿಕೊಂಡಿದ್ದ ಪಿಎಸ್ಐ ಪ್ರವೀಣ್ ಎಸ್ ಪಿ ರವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಜಾಡು ಪತ್ತೆ ಹಚ್ಚಲು ಕ್ರೈಂ ಸಿಬ್ಬಂದಿಗಳಾದ ಉಮೇಶ್, ಶಿವಕುಮಾರ್ ಒಳಗೊಂಡ ತಂಡವನ್ನು ರಚಿಸಿದ್ದರು.

ಈ ತಂಡಕ್ಕೆ ಖಾಸಗಿ ಭಾತ್ಮಿದಾರನೊಬ್ಬ ನೀಡಿದ ಸಣ್ಣ ಸುಳಿವು ಇಡೀ ಪ್ರಕರಣದ ದಿಕ್ಕನ್ನು ಬದಲಾಯಿಸಿತು. ಯುವಕನೊಬ್ಬ ಬಂಗಾರ ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಂದರಲ್ಲಿ ವಿಚಾರಿಸಿರುತ್ತಾನೆ. ಇದನ್ನು ಗಮನಿಸಿದ ಖಾಸಗಿ ಪೊಲೀಸ್ ಭಾತ್ಮಿದಾರನೊಬ್ಬ ಈ ಸುಳಿವನ್ನು ಪೊಲೀಸರಿಗೆ ತಿಳಿಸಿದ್ದಾನೆ.

ಈ ಮಾಹಿತಿಯನ್ನಾಧರಿಸಿ ತಂಡ ಬೇರೆಯದೇ ಶೈಲಿಯಲ್ಲಿ ತನಿಖೆ ಕೈಗೊಂಡು ಆ ಯುವಕನನ್ನು ಹಿಂಬಾಲಿಸಿ, ಚಲನವಲನಗಳನ್ನು ಗಮನಿಸಿ ಕಳ್ಳತನ ನಡೆದ ಸ್ಥಳದಲ್ಲಿ ಆತನು ಇದ್ದನೆಂಬುವುದು ಮೊಬೈಲ್ ಲೊಕೇಷನ್ ಆಧಾರದಲ್ಲಿ ಧೃಡಪಡಿಸಿಕೊಂಡು ಶನಿವಾರ ಶಿವಮೊಗ್ಗ ರಸ್ತೆಯ ಖಾಸಗಿ ಹೋಟೆಲ್ ಬಳಿಯಲ್ಲಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ.ನಂತರ ಠಾಣೆಗೆ ಕರೆತಂದು ವಿಚಾರಿಸಿದಾಗ ಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅವರ ಮಾಹಿತಿಯ ಮೇರೆಗೆ ಇನ್ನೊಬ್ಬ ಆರೋಪಿಯನ್ನು ಆತನ ಮನೆಯಲ್ಲಿಯೇ ಬಂಧಿಸಿದರು. ನಂತರ ಕದ್ದ ಮಾಲನ್ನು ಆರೋಪಿಗಳಿಂದ ವಶಪಡಿಸಿಕೊಳ್ಳುತ್ತಾರೆ.

Leave A Reply

Your email address will not be published.

error: Content is protected !!