ಈಶ್ವರಪ್ಪ ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳುವುದಿಲ್ಲ ; ಆರಗ ಜ್ಞಾನೇಂದ್ರ

0 323

ಶಿವಮೊಗ್ಗ : ನಾನು ಈಶ್ವರಪ್ಪ ಮನೆಗೆ ಭೇಟಿ ನೀಡಿ, ಮಾತನಾಡಿದ್ದೇನೆ. ಸ್ವಲ್ಪ ಉದ್ವೇಗ, ಸಿಟ್ಟಿನಲ್ಲಿದ್ದಾರೆ. ಅವರು ಯಾವುದೇ ಕೆಟ್ಟ
ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಈಶ್ವರಪ್ಪ ಅಸಮಾಧಾನ, ಬಂಡಾಯ ಸ್ಪರ್ಧೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಬಹಳ ಕೆಲಸ ಮಾಡಿದ್ದಾರೆ. ಹಿಂದುತ್ವ, ಮೋದಿ, ರಾಷ್ಟ್ರ ಇವೆಲ್ಲಾ ಈಶ್ವರಪ್ಪ ಕುಟುಂಬದ ರಕ್ತದಲ್ಲಿ ಬಂದಿದೆ.ಯಾವುದೇ ಕೆಟ್ಟ ನಿರ್ಧಾರವನ್ನ ಈಶ್ವರಪ್ಪ ಮಾಡಲ್ಲ. ನಮ್ಮ ಹಿರಿಯರು ಅವರ ಜೊತೆ ಮಾತಾಡ್ತಾ ಇದ್ದಾರೆ. ಅವರ ಮಗನಿಗೆ ಕೊಡಲಿಲ್ಲ ಎಂಬ ನೋವಿನ ಜೊತೆ ಸಿಟ್ಟಿನಲ್ಲಿದ್ದಾರೆ. ಅವರನ್ನು ಭೇಟಿಯಾದಾಗ ಅನೇಕ ಸಂಗತಿ ಅವರು ಕೂಡ ಹೇಳಿದ್ದಾರೆ. ನಾನು ಯಡಿಯೂರಪ್ಪ ಅವರ ಜೊತೆ ಕೂಡ ಮಾತನಾಡಿದ್ದೇನೆ. ಅವರಿಗೆ ಅನ್ಯಾಯವಾಗಲು ಬಿಡಲು ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದರು.

ಎಲ್ಲವನ್ನು ಒಂದೇ ದೃಷ್ಟಿಕೋನದಲ್ಲಿ ನೋಡೋಕೆ ಅಗಲ್ಲಾ. ಬೇರೆ ಬೇರೆ ರೀತಿ ಇರುತ್ತೇ. ಮೋದಿ ಕಾರ್ಯಕ್ರಮದೊಳಗೆ ಎಲ್ಲವೂ ಸರಿಯಾಗುವ ನಿರೀಕ್ಷೆಯಿದೆ ಎಂದರು.

ಮಾರ್ಚ್ 18 ರಂದು ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ.ಅವರನ್ನ ಸ್ವಾಗತಿಸಲು ಬಹಳ ದೊಡ್ಡ ಕಾರ್ಯಕರ್ತರ ಪಡೆ ಸಜ್ಜಾಗಿದೆ. ಮೂರ್ನಾಲ್ಕು ಲಕ್ಷ ಜನರು ಬರುವ ನಿರೀಕ್ಷೆಯಿದೆ. ಶಿವಮೊಗ್ಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬಹಳ ಕೊಡುಗೆ ನೀಡಿದೆ.
– ಆರಗ ಜ್ಞಾನೇಂದ್ರ, ಶಾಸಕರು

Leave A Reply

Your email address will not be published.

error: Content is protected !!