ಕರಾಟೆ ; ಇಂದಿರಾಗಾಂಧಿ ವಸತಿ ಶಾಲೆ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ

0 118

ಶಿವಮೊಗ್ಗ: ಸೆ.23ರಂದು ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ಶಿವಮೊಗ್ಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗಾಡಿಕೊಪ್ಪದ ಹಿಂದುಳಿದ ವರ್ಗದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಗೇರುಪುರ ಮಕ್ಕಳು ಭಾಗವಹಿಸಿ ಉತ್ತಮ ಪದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ವಿಜೇತ ಮಕ್ಕಳ ವಿವರ : ಅಂಕಿತಾ ಡಿ.ಕೆ., 9ನೇತರಗತಿ, ಪ್ರಥಮ ಸ್ಥಾನ. ಕೀರ್ತಿ ಸಿ.ಬಿ,. 7ನೇ ತರಗತಿ, ಪ್ರಥಮ ಸ್ಥಾನ. ತನು ಶ್ರೀ ಓ.ವೈ,. 7ನೇ ತರಗತಿ, ದ್ವಿತೀಯ ಸ್ಥಾನ. ಪಲ್ಲವಿ ಕೆ , 9ನೇ ತರಗತಿ, ದ್ವಿತೀಯ ಸ್ಥಾನ. ಅನುಜ್ಞಾ ಟಿ.ಆರ್. 7ನೇ ತರಗತಿ, ತೃತೀಯ ಸ್ಥಾನ. ಶ್ವೇತಾ ಕೆ.ಎಸ್., 9ನೇ ತರಗತಿ, ತೃತೀಯ ಸ್ಥಾನ. ಅಂಕುಶ್ ಸಿ.ಎಸ್., 9ನೇ ತರಗತಿ, ತೃತೀಯ ಸ್ಥಾನ ಪಡೆದಿರುತ್ತಾರೆ.


ವಿಜೇತ ಮಕ್ಕಳಿಗೆ ಹಾಗೂ ತರಬೇತುದಾರರಾದ ಮುರುಳಿ ಸಣ್ಣಕ್ಕಿಯವರಿಗೆ ಶಾಲೆಯ ಪ್ರಾಂಶುಪಾಲ ಯೋಗೇಶ್ ಹೆಚ್ ಹೆಬ್ಬಳಗೆರೆ ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!