ಕುಡಿದ ಮತ್ತಿನಲ್ಲಿ ಓಮ್ನಿ ವಾಹನಕ್ಕೆ ಗುದ್ದಿದ ಪಿಕಪ್ ಚಾಲಕ, ಓಮ್ನಿ ಚಾಲಕನ ಎರಡು ಕಾಲು ಕಟ್ !
ಹೊಸನಗರ : ಕುಡಿದ ಮತ್ತಿನಲ್ಲಿ ಅತೀ ವೇಗದಲ್ಲಿ ಪಿಕಪ್ ವಾಹನ ಚಾಲನೆ ಮಾಡಿ ಎದುರಿನಿಂದ ಬಂದ ಓಮ್ನಿ ವಾಹನಕ್ಕೆ ಗುದ್ದಿದ ಪರಿಣಾಮ ಓಮ್ನಿ ಚಾಲಕನ ಎರಡು ಕಾಲು ತುಂಡಾದ ಘಟನೆ ಮಾಸ್ತಿಕಟ್ಟೆ – ಹುಲಿಕಲ್ ನಡುವೆ ಸಂಭವಿಸಿದೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://fb.watch/roT8Sv6vqW/
ಘಟನೆಯಲ್ಲಿ ಹುಲಿಕಲ್ ನರಸಿಂಹಸ್ವಾಮಿ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಎಂಬುವವರ ಎರಡು ಕಾಲು ತುಂಡಾಗಿದ್ದು ಗಂಭೀರ ಗಾಯಗೊಂಡ ಇವರನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಸಿದ್ಧಾಪುರದಿಂದ ಹೊಸನಗರ ಕಡೆ ಬರುತ್ತಿದ ಪಿಕಪ್ ವಾಹನದ ಚಾಲಕ ಮದ್ಯ ಸೇವಿಸಿದ್ದು ಸಾರ್ವಜನಿಕರು ಈತನನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಸಹ ನಡೆಯಿತು.
ಈ ಘಟನೆ ಹಿನ್ನೆಲೆ ಅರ್ಧ ಗಂಟೆಗೂ ಅಧಿಕ ಹೊತ್ತು ಕುಂದಾಪುರ-ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.