ಹೊಸನಗರ ಪ.ಪಂ. ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಬಿಜೆಪಿ ಸೇರ್ಪಡೆ
ಹೊಸನಗರ : ಸುಮಾರು ಹತ್ತು ವರ್ಷಗಳಿಂದ ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಛಾಪು ಮೂಡಿಸಿಕೊಂಡು ಪಟ್ಟಣ ಪಂಚಾಯತಿ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಪಟ್ಟಣ ಪಂಚಾಯತಿ ಹಾಲಿ ಸದಸ್ಯ, ಒಕ್ಕಲಿಗೆ ಸಂಘದ ನಿರ್ದೇಶಕ ಹಾಲಗದ್ದೆ ಉಮೇಶ್ ಕಾಂಗ್ರೆಸ್ ಪಕ್ಷ ತೊರೆದು ಶಿಕಾರಿಪುರದ ಯಡಿಯೂರಪ್ಪ ನಿವಾಸದಲ್ಲಿ ಅವರ ಸಮ್ಮುಖದಲ್ಲಿ ನೂರಾರು ಜನ ಅಭಿಮಾನಿಗಳೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಹಕ್ರೆ ಮಲ್ಲಿಕಾರ್ಜುನ್, ಸುರೇಶ್ ಬಿ.ಸ್ವಾಮಿರಾವ್, ಎಂ.ಬಿ.ಚನ್ನವೀರಪ್ಪ, ಶರಧಿ ಪೂರ್ಣೇಶ್, ಚಂದ್ರವಳ್ಳಿ ಸೋಮಶೇಖರ್ ಉಪಸ್ಥಿತರಿದ್ದರು.
ಆನೆ ಬಲ ಬಂದಿದೆ: ನಿಟ್ಟೂರು ಸುಬ್ರಹ್ಮಣ್ಯ
ಹೊಸನಗರ ತಾಲ್ಲೂಕಿನಲ್ಲಿ ತನ್ನದೇ ಛಾಪು ಮೂಡಿಸಿಕೊಂಡು ಬಡವರಿಗೆ ಸಹಾಯ ಹಸ್ತ ನೀಡುವುದರ ಜೊತೆಗೆ ಪಟ್ಟಣ ಪಂಚಾಯತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಜೊತೆಗೆ ತಾಲ್ಲೂಕಿನಲ್ಲಿ ನಡೆಯುವ ಎಲ್ಲ ಹೋರಾಟಗಳಿಗೂ ತಮ್ಮದೇ ಕೊಡುಗೆ ನೀಡುತ್ತಾ ಬಂದಿರುವ ಹಾಲಗದ್ದೆ ಉಮೇಶ್ರವರು ಹಾಗೂ ಅವರ ನೂರಾರು ಅಭಿಮಾನಿಗಳು ಬಿಜೆಪಿ ಪಕ್ಷ ಸೇರ್ಪಡೆಗೊಂಡಿರುವುದರಿಂದ ಆನೆ ಬಲ ಬಂದಾಂತಾಗಿದೆ ಎಂದು ತಾಲ್ಲೂಕು ಬಿಜೆಪಿ ಮಂಡಳದ ಅಧ್ಯಕ್ಷರಾದ ನಿಟ್ಟೂರು ಸುಬ್ರಹ್ಮಣ್ಯರವರು ಹೇಳಿದ್ದಾರೆ.
ಬಿಜೆಪಿ ಕಛೇರಿಗೆ ಭೇಟಿ:
ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಸೇರ್ಪಡೆಗೊಂಡ ನಂತರ ಹೊಸನಗರದ ಬಿಜೆಪಿ ಕಚೇರಿಗೆ ಆಗಮಿಸಿದ ಹಾಲಗದ್ದೆ ಉಮೇಶ್ ಮಾತನಾಡಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿ.ವೈ ರಾಘವೇಂದ್ರರವರನ್ನು ಅತೀ ಹೆಚ್ಚಿನ ಮತಗಳಿಂದ ಗೆಲ್ಲಿಸುವ ಗುರಿ ಹೊಂದಿದ್ದು ಹಾಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಾನು ಮನೆ-ಮನೆಗೆ ಹೋಗಿ ಪ್ರಚಾರ ಕೈಗೊಳ್ಳುತೇವೆ ಎಂದರು.
ಹೊಸನಗರ ಬಿಜೆಪಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗಣಪತಿ ಬಿಳಗೋಡು, ಮನೋಹರ ಪಿ, ಗುರುರಾಜ್, ಆರ್, ಬಿಜೆಪಿ ಹರಿಯರಾದ ಎನ್.ಆರ್ ದೇವಾನಂದ್, ಕೋಣೆಮನೆ ಶಿವಕುಮಾರ್, ಮಂಡಾನಿ ಮೋಹನ್, ಮಂಜುನಾಥ್ ಸಂಜೀವಣ್ಣ, ಸತ್ಯನಾರಾಯಣ ವಿ, ನರ್ಲೆ ರಮೇಶ್ ನಾಗರ್ಜುನ್, ಕಾಲುಸಸಿ ಸತೀಶ, ವಿಜಯಕುಮಾರ್, ರಾಘವೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.