ಮಾದಕ ವಸ್ತುಗಳಿಂದ ದೂರವಿರಿ ; ಪಿಎಸ್ಐ ಶಂಕರ ಗೌಡ ಪಾಟೀಲ್

Written by Mahesha Hindlemane

Published on:

ಹೊಸನಗರ ; ಮಾದಕ ವಸ್ತುಗಳನ್ನು ಸೇವಿಸುವಾಗ ತುಂಬಾ ಸಂತೋಷವಾದರೂ ನಂತರ ಮನುಷ್ಯನ ಮೆದುಳಿನ ಮೇಲೆ ಹಾಗೂ ದೇಹದ ಸಹಜ ಕಾರ್ಯ ವ್ಯತ್ಯಾಸಗೊಳಿಸಿ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಮನುಷ್ಯರ ಮನಸ್ಥಿತಿ ಆಲೋಚನಾ ಶಕ್ತಿ ಮತ್ತು ವರ್ತನೆಗಳನ್ನು ದುರ್ಬಲಗೊಳಿಸುತ್ತದೆ ಆದ್ದರಿಂದ ಮಾದಕ ವಸ್ತುಗಳ ಸೇವನೆ ಮಾಡಬೇಡಿ ಎಂದು ಹೊಸನಗರದ ಸಬ್ ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಜಾ ಅಫೀಮು, ಕೊಕೇನ್ ಚರಸ್, ಹೆರಾಯಿನ್ ಅಥವಾ ಇತರೆ ವಸ್ತುಗಳಿಗೆ ಸಂಬಂಧಿಸಿದ ಗಿಡಗಳನ್ನು ಬೆಳೆಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ‌. ಅಲ್ಲದೇ ಅಂತಹ ಡ್ರಗ್ಸ್ ಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳುವುದು ಸೇವಿಸುವುದು ಮಾರುವುದು ಖರೀದಿಸುವುದು ಸಾಗಿಸುವುದು ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ನಶೆ ಏರುವ ಟ್ಯಾಬ್ಲೆಟ್ ಅಥವಾ ಯಾವುದೇ ಮಾದಕ ವಸ್ತುಗಳನ್ನು ಸೇವಿಸಬೇಡಿ. ಕ್ಷಣಿಕ ಸುಖ ನೀಡುವ ಮೋಹಕ್ಕೆ ಬಿದ್ದು ಸುಂದರ ಜೀವನ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ತಿಳಿದ ತಕ್ಷಣ ಅವರ ಪಾಲಕರಿಗೆ ವಿಷಯ ಮುಟ್ಟಿಸಿ ಸಾಧ್ಯವಾದರೇ ಪುನಶ್ಚೇತನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದುಶ್ಚಟವನ್ನು ಬಿಡಿಸಲು ಪ್ರಯತ್ನಿಸಿ ಇದರ ಜೊತೆಗೆ ಸಮಾಜವನ್ನು ಮಾದಕ ವಸ್ತುಗಳ ವ್ಯಸನ ಮತ್ತು ಸಾಗಾಟದ ಪಿಡುಗುಗಳಿಂದ ಮುಕ್ತಗೊಳಿಸಲು ಪೊಲೀಸರೊಂದಿಗೆ ಸಹಕರಿಸಿ ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಕೈಜೋಡಿಸಿ ಮಕ್ಕಳು ಈ ದೇಶದ ಅಮೂಲ್ಯ ಆಸ್ತಿಯಾಗಿದ್ದು ನಿಮ್ಮೆಲ್ಲರ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದರು.

ಎನ್‌ಡಿಪಿಎಸ್ ಕಾಯ್ದೆಯ ಬಗ್ಗೆ ಮಾತನಾಡಿದ ಅವರು, ಈ ಕಾಯ್ದೆ ಉಲ್ಲಂಘಿಸಿದರೆ 10 ವರ್ಷಗಳ ಕಡಿಮೆ ಇಲ್ಲದೆ 20 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಹಾಗೂ 2 ಲಕ್ಷದವರೆಗೆ ದಂಡ ನಂತರ ಪುನಃ 2ನೇ ಬಾರಿ ತಪ್ಪು ಮಾಡಿದರೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು, ಉತ್ತಮ ಸಮಾಜ ನಿರ್ಮಾಣ ಮಾಡಲು ನಿಮ್ಮಂತಹ ಯುವಕರು ನಮ್ಮೊಂದಿಗೆ ಕೈ ಜೋಡಿಸಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ಶ್ರೀನಿವಾಸ್ ನಾಯ್ಕ್, ಧಾಮೋದರ ಶಣೈ, ಸ್ವಾಮಿರಾವ್ ಉಪನ್ಯಾಸಕ ವರ್ಗ, ರಕ್ಷಣಾ ಇಲಾಖೆಯ ಪ್ರವೀಣ್, ಗೋಪಾಲಕೃಷ್ಣ, ಶಿವರಾಜ್, ಮಧುಸೂದನ್, ಸುನೀಲ್ ಇನ್ನೂ ಮುಂತಾದವರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಕರಿಬಸಮ್ಮ, ಜಯಮ್ಮ, ಇನ್ನೂ ಮತ್ತಿತರರು ಉಪಸ್ಥಿತರಿದ್ದರು.

Leave a Comment